ನಾಯಕರಿಂದ ಸೈಕಲ್ ರ‍್ಯಾಲಿ ಪ್ರತಿಭಟನೆ

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಹಿನ್ನಲೆ, ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್,ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ರ‍್ಕಾರದ ವಿರುದ್ಧ ಸಿದ್ದರಾಮಯ್ಯ,ಡಿಕೆಶಿ ನೇತೃತ್ವದಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಕಛೇರಿಯಿಂದ ಐಟಿ ಕಛೇರಿವರೆಗೆ ಸೈಕಲ್ ರಾಲಿ ನಡೆಸಿದರು. ಈ ಸಂರ‍್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಚ್ಚಾ ತೈಲ ಬೆಲೆ ೩೭ ಡಾಲರ್ ಇದ್ದರೂ,ಕೇಂದ್ರ ರ‍್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ, ನನ್ನ ಪ್ರಕಾರ ಈಗ ಪೆಟ್ರೋಲ್ ಬೆಲೆ ೨೫ರೂ ಇರಬೇಕಿತ್ತು. ಕೋವಿಡ್ ಪರಿಸ್ಥಿಯಲ್ಲಿಯೂ ಸಹ ಕಳೆದ ೧೦ ದಿನಗಳಿಂದ ೧೧ರೂ.ಹೆಚ್ಚಿಸಿದ್ದಾರೆ. ಮನ್ಮೋಹನ್ ಸಿಂಗ್ ರ‍್ಕಾರ ಸಬ್ಸಿಡಿ ನೀಡಿತ್ತು, ಆದರೆ ಈ ರ‍್ಕಾರ ಏನೂ ಕೊಟ್ಟಿಲ್ಲ. ಸಾಮನ್ಯ ಜನರಿಗೆ,ರೈತರಿಗೆ,ಇಂಡಸ್ಟ್ರೀಸ್ ಮೇಲೆ ದುಬಾರಿಯಾಗಿದೆ, ರ‍್ಕಾರ ಬಡವರ ಮೇಲೆ ಬರೆ ಹಾಕ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ಸಂರ‍್ಭದಲ್ಲಿ ಚೆಲುವರಾಯಸ್ವಾಮಿ,ಜಮೀರ್ ಅಹ್ಮದ್, ಕರ‍್ಯರ‍್ತರು ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

Next Post

ಠಾಣೆಗಳಿಗೆ ಸ್ಯಾನಿಟೈಸೇಷನ್

Tue Jun 30 , 2020
ದೊಡ್ಡಬಳ್ಳಾಪುರ ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಆದೇಶದ ಮೇರೆಗೆ ಪೊಲೀಸ್ ಠಾಣೆಗಳಿಗೆ ಡ್ರೋಣ್ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಸುರಕ್ಷಿತ ದೃಷ್ಠಿಯಿಂದ ಸಿಟ್ರೋ ಬಯೋ ಶೀಲ್ಡ್ ಸೋಂಕು ನಿವಾರಕವನ್ನು ಪೊಲೀಸ್ ಠಾಣೆ ಮೇಲೆ ಡ್ರೋಣ್ ಮೂಲಕ ಸಿಂಪಡಣೆ ಮಾಡಲಾಗುತ್ತಿದೆ. ಈ ಸೋಂಕು ನಿವಾರಕ ಹಾನಿಕಾರಕವಲ್ಲದ ಆರ್ಗಾನಿಕ್ ಆಗಿದೆ. ಮೊದಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial