ರಾಜ್ಯದಲ್ಲಿ ಭಂಡ ಸರ್ಕಾರ ಆಡಳಿತ ನಡೆಸುತ್ತಿದೆ- ಮಾಜಿ ಸಚಿವ ರಮಾನಾಥ ರೈ

 ರಾಜ್ಯದಲ್ಲಿ ಭಂಡ ಸರ್ಕಾರ ಆಡಳಿತ ನಡೆಸುತ್ತಿದೆ’ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದರು. ಮಡಿಕೇರಿಯಲ್ಲಿ ಮಾತನಾಡಿದ ಅವರು,‘ವೈದ್ಯಕೀಯ ಉಪಕರಣ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಬಂದರೂ ತನಿಖೆ ನಡೆಸುತ್ತಿಲ್ಲ. ಅಧಿಕಾರಕ್ಕೆ ಬಿಜೆಪಿಯುವರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ.

ಇವರಿಗೆ ಜನಹಿತ ಬೇಕಿಲ್ಲ. ಕೋವಿಡ್‌ ಹೆಸರಿನಲ್ಲಿ ದುಡ್ಡು ಹೊಡೆದಿರುವ ಸರ್ಕಾರದ ವಿರುದ್ದ ನಮ್ಮ ಹೋರಾಟ ನಡೆಯುತ್ತಿದೆ. ಪ್ರತಿ ಗ್ರಾಮಕ್ಕೂ ತೆರಳಿ ಸರ್ಕಾರದ ಭ್ರಷ್ಟಾಚಾರದ ಮಾಹಿತಿ ನೀಡುತ್ತೇವೆ’.ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಖರೀದಿಗೆ ಅನುಮತಿ ಕೊಟ್ಟಿದ್ದಾರೆ. ಈಗ ಅವರು ಯಾವುದಕ್ಕೂ ಸ್ಪಷ್ಟನೆ ಕೊಡುತ್ತಿಲ್ಲ. ದುಡ್ಡು ತಿಂದವರೇ ಮಾತನಾಡಲಿ ಎಂದು ಯಡಿಯೂರಪ್ಪ ಮೌನವಾಗಿರಬಹುದು’ ಎಂದು ರೈ ಕುಟುಕಿದರು.

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕಾ ಸಂಸದರು ಪಕ್ಷಭೇದ ಮರೆತು ಭಾರತಕ್ಕೆ ಬೆಂಬಲ

Sat Aug 1 , 2020
ಭಾರತದ ಪೂರ್ವ ಲಡಾಖ್ ಗಾಲ್ವಾನ್ ಗಡಿಯಲ್ಲಿನ ಸಂಘಷಕ್ಕೆ ಕಾರಣರಾಗಿದ್ದ ಚೀನಾ ಸೇನಯ ವಿರುದ್ದ ಅಮೆರಿಕಾದ ಸಂಸದರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದ್ದಾರೆ.ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಪ್ರಕ್ಷÄಬ್ಧ ವಾತವರಣ ನಿರ್ಮಾಣಗೊಂಡಿತ್ತಲ್ಲದೇ ಕಣಿವೆಯಲ್ಲಿ ಭಾರತದ ೨೦ಜನ ಯೋಧರು ಹುತಾತ್ಮರಾದರು. ಎಷ್ಟು ಜನ ಪಿಎಲ್‌ಎ ಆರ್ಮಿಯ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಈ ವರೆಗೂ ಮಾಹಿತಿ ನೀಡಿಲ್ಲ. ಹೌಸ್ ಆಫ್ ರೆಪ್ರಸೆಂಟೇಟಿವ್ ಮತು ಸೆನೆಟ್‌ನಲ್ಲಿ ಮಾತನಾಡಿದ ಸಂಸದರು, ಭಾರತದ ಗಡಿಯನ್ನು […]

Advertisement

Wordpress Social Share Plugin powered by Ultimatelysocial