ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಯ ವರದಿಯ ವಿಳಂಬವೇ ಕಾರಣವಾಗುತ್ತಿದೆ. ಕೊರೋನಾ ಪರೀಕ್ಷೆಗೆ ಕೊಟ್ಟು ಮೂರು ನಾಲ್ಕು ದಿನ ಕಳೆದ್ರೂ ವರದಿ ಬರಲ್ಲ. ಇದೇ ಇತರರಿಗೂ ಕೊರೋನಾ ಸೋಂಕು ಹಬ್ಬಲು ಕಾರಣವಾಗಿದೆ. ಹೀಗಾಗಿ ಕೊರೋನಾ ಪರೀಕ್ಷೆಯ ವರದಿಯನ್ನು ನೀಡೋದ್ರಲ್ಲಿ ತ್ವರಿತಗೊಳಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಒಂದು ದಿನದಲ್ಲಿ ಫಲಿತಾಂಶ ನೀಡುವಂತಾಗಬೇಕು. ಇಲ್ಲವಾದಲ್ಲಿ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ
Please follow and like us: