ಆಗಸ್ಟ್ ೫ ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್ ‘ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಆಗಸ್ಟ್ ೪ರಂದು ನಾನು ಅಯೋದ್ಯೆಗೆ ತಲುಪಿ, ಮರುದಿನ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ. ಇದು ನನಗೆ ಅತ್ಯಂತ ಸಂತಸ ತರುವ ವಿಚಾರವಾಗಿದೆ’ ಎಂದು ಕಲ್ಯಾಣ್ ಸಿಂಗ್ ಹೇಳಿದ್ದಾರೆ. ೧೯೯೨ ರಲ್ಲಿ ನಡೆದ ಬಾಬ್ರಿ ಮ ಸೀದಿ ಧ್ವಂಸವಾದಾಗ ಕಲ್ಯಾಣ್ ಸಿಂಗ್ರವರು ಮುಖ್ಯಮಂತ್ರಿಯಾಗಿದ್ದರು ಹಾಗಾಗಿ ಇವರ ಮೇಲೂ ಸಹ ತನಿಖೆ ನಡೆಯುತ್ತಿದೆ
ರಾಮ ಮಂದಿರ ಶಿಲಾನ್ಯಾಸ ಅತ್ಯಂತ ಸಂತಸದ ವಿಚಾರ
Please follow and like us: