ರಾಯಚೂರು ಜಿಲ್ಲೆಯಾದ್ಯಂತ ರಸ್ತೆಗಳ ಮದ್ಯೆ ಹೆಚ್ಚಾದ ದನಗಳಿಂದ ಅಪಾಘಾತ ಸಂಭವಿಸುತ್ತಿರುವುದನ್ನು ಗಮನಿಸಿ ದನಗಳನ್ನು ಗೋಶಾಲೆಗೆ ಸೇರಿಸಿ ಪೊಲೀಸ್ ಇಲಾಖೆ ವಾರಸುದಾರರಿಗ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರಸಭೆ ರಾಯಚೂರು ವತಿಯಿಂದ ವಿಶೇಷ ಕಾರ್ಯಾಚರಣೆ ಮಾಡುವ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಮಲಗಿದ 34 ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಸಾಗಿಸಲಾಗಿದೆ. ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದರು ಮತ್ತೆ ಮತ್ತೆ ಬೀದಿಗೆ ಬಿಡುವದರಿಂದ ವಾರಸುದಾರರಿಗೆ ದನಗಳನ್ನು ಮರಳಿ ಕೊಡುವುದಿಲ್ಲ.ದನಕರುಗಳನ್ನು ಬೀದಿಗೆ ಬಿಡುವುದರಿಂದ ಅಪಘಾತಗಳು,ಕಳ್ಳತನ ನಡೆದು ಗಲಾಟೆ-ಗಲಭೆಗಳು ಸಂಭವಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಬರುವದರಿಂದ ಪ್ರಕರಣಗಳಾಗುವ ಸಂದರ್ಭ ಇರುತ್ತದೆ. ಯಾವುದೇ ಕಾರಣಕ್ಕೂ ದನಗಳನ್ನು ಮರಳಿ ಹಿಂತಿರುಗಿಸಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ರಾಯಚೂರು ಜಿಲ್ಲೆಯಾ ರಸ್ತೆಗಳಲ್ಲಿ ಮಲಗಿದ ಪಶುಗಳು
Please follow and like us: