ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಪೊಲೀಸರು ಬಂದೋ ಬಸ್ತ್ ಮಾಡಿ ಫುಲ್ ಸುಸ್ತಾಗಿ ಹೋಗಿದ್ದಾರೆ ..ಈ ನಡುವೆ ಲಾಕ್ ಡೌನ್ ಕೂಡ ಮಾಡಲಾಗಿದೆ..ಈ ಮಧ್ಯೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾತ್ರ ಕೊರೊನಾ ಬಂದೋ ಬಸ್ತ್ ಮಾಡುತ್ತಲೇ ಒಂದು ಮಹತ್ತರ ಕಾರ್ಯ ಮಾಡಿದ್ದಾರೆ .ಈ ನಡುವೆ ಸಮಯ ಸಿಕ್ಕಾಗೆಲ್ಲಾ ತಮ್ಮ ಮನೆಯ ಗಾರ್ಡನ್ ನಲ್ಲಿ ಹಣ್ಣು ತರಕಾರಿ ಬೆಳೆದಿದ್ದಾರೆ ..ಮನೆಗೆ ದಿನ ನಿತ್ಯ ಬೇಕಾದ ತರಕಾರಿಗಳಾದ ಮೆಣಸೀನಕಾಯಿ,ಟಮೋಟೋ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆಯೋ ಮೂಲಕ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರೈತರಾಗಿ ಬದಲಾಗಿದ್ದಾರೆ..ಅವರೇ ಸ್ವತಃ ಕೊರೊನಾ ಹಿನ್ನಲೆ ತಾವು ಬೆಳೆದ ತರಕಾರಿ ಬಗ್ಗೆ ಮಾತನಾಡಿದ್ದಾರೆ ನೋಡಿ..
ಲಾಕ್ ಡೌನ್ ಹಿನ್ನಲೆ ಫ್ರೀ ಟೈಂನಲ್ಲಿ ತರಕಾರಿ ಬೆಳೆ ಪೊಲೀಸ್ ಅಧಿಕಾರಿ
Please follow and like us: