ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹುಂಡಿಯಲ್ಲಿ ಗ್ರಾಮದಲ್ಲಿ ಅಪಾರವಾದ ಬಾಳೆಗಿಡ ನಾಶವಾಗಿದೆ. ಗುರುಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಎರಡೂವರೆ ಎಕರೆಯ ಬಾಳೆಗಿಡ ಕಟಾವಿಗೆ ಬಂದಿದ್ದು.ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗಿದೆ….ಸರ್ವೆ ನಂಬರ್ 161 /4 ರಲ್ಲಿ ಬೆಳೆದು ಬಾಳೆಗೊನೆ ಕೇರಳಕ್ಕೆ ಮಾರಾಟ ಮಾಡುತ್ತಿದ್ದ ರೈತ ಗುರುಸ್ವಾಮಪ್ಪ.ಕೊರೊನಾ ಸಮಯದಲ್ಲಿ ಅಪಾರ ನಷ್ಟವನ್ನು ಅನುಭವಿಸಿ ಆರ್ಥಿಕವಾಗಿ ಮೇಲೆತ್ತುವ ಸಂದರ್ಭದಲ್ಲಿ .ಗಾಳಿ ಮಳೆಗೆ ಬಾಳೆ ಗಿಡ ನೆಲಕ್ಕರುಳಿದೆ.ಇನ್ನು ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿ ಕೊಂಡ ರೈತ ನೀಡಿ ಎಂದು ರೈತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ..