ಆಸಿಡ್ ದಾಳಿ ಪ್ರಕರಣ; ಆರೋಪಿ ಬಂಧಿಸಿದ ಪೊಲೀಸರಿಗೆ ತಲಾ 2 ಲಕ್ಷ ರೂ.

ಬೆಂಗಳೂರು: ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗೇಶ್ ನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಮಿಷ್ನರ್ ಕಮಲ್ ಪಂತ್, ಪಶ್ಚಿಮ ವಿಭಾಗ ಪೊಲೀಸರು ಆರೋಪಿ ನಾಗೇಶ್ ನನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲಿಸರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.

ಆರೋಪಿ ಯಾವುದೇ ಸುಳಿವಿಲ್ಲದೇ ನಾಪತ್ತೆಯಾಗಿದ್ದ. ಡಿಸಿಪಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯನ್ನು ಆಕೆಗೆ ಗೊತ್ತಾಗದಂತೆ ಹಿಂಬಾಲಿಸುತ್ತಿದ್ದ. ಪ್ರತಿಬಾರಿ ಆಕೆಯನ್ನು ಮದುವೆಯಾಗುವಂತೆ ಕೇಳುತ್ತಿದ್ದ. ಆದರೆ ಯುವತಿ ನೀನು ನನ್ನ ಅಣ್ಣನಂತೆ ಇದ್ದೀಯಾ. ಮತ್ತೆ ಮತ್ತೆ ಈ ವಿಚಾರ ಕೇಳಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಳು. ಆದರೂ ಆರೋಪಿ ಯುವತಿಯ ಹಿಂದೆ ಬಿದ್ದಿದ್ದ. ಏ.20ರಂದು ಆರೋಪಿ ಖಾಸಗಿ ಕಂಪನಿ ಲೆಟರ್ ಹೆಡ್ ಬಳಸಿ ಸಲ್ಫ್ಯೂರಿಕ್ ಆಸಿಡ್ ಖರೀದಿ ಮಾಡಿದ್ದ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವಾದ್ರೂ ಒಪ್ಸಿ ಅವಳ ಜತೆ ಮದ್ವೆ ಮಾಡ್ಸಿ ಸಾರ್​. ಪೊಲೀಸರ ಬಳಿ ಗೋಗರೆದ ಆಯಸಿಡ್​ ನಾಗ​! ಇಷ್ಟಲ್ಲಾ ಆದ್ರೂ ನಿಲ್ಲದ​ ಹುಚ್ಚಾಟ

Sat May 14 , 2022
ಬೆಂಗಳೂರು: ಸಾಕಷ್ಟು ಟ್ರೈ ಮಾಡ್ದೆ ಸಾರ್, ಅವಳು ನನ್ನ ಪ್ರೀತಿಗೆ ಬೀಳಲಿಲ್ಲ.. ನೀವಾದ್ರೂ ಒಪ್ಸಿ ಸಾರ್… ಅವಳನ್ನು ಮದ್ವೆ ಆಗ್ತೀನಿ… ಎಂದು ಪೊಲೀಸರ ಬಳಿ ಆಯಸಿಡ್​ ದಾಳಿಕೋರ ನಾಗೇಶ್​ ಗೋಗರೆದಿದ್ದಾನೆ. ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿರೋ ಆರೋಪಿ, ಪೊಲೀಸರ ಮುಂದೆಯೂ ಆ ಯುವತಿಯನ್ನ ಬಿಟ್ಟು ಇರಲು ಆಗಲ್ಲ ಎಂದಿದ್ದಾನೆ. ನೀವಾದ್ರೂ ಒಪ್ಸಿ ಮದ್ವೆ ಮಾಡ್ಸಿ ಸಾರ್​… ಇಲ್ಲಾ ಜೈಲಿಗೆ ಹಾಕಿ ಎಂದಿದ್ದಾನೆ. ಜೈಲಿಗೆ ಹಾಕ್ತೀರಾ.. ಮೂರೊತ್ತೂ ಊಟ ಹಾಕ್ತೀರಾ ಬಿಡಿ […]

Advertisement

Wordpress Social Share Plugin powered by Ultimatelysocial