ವಿಜಯಪುರ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಗೆಂದು ಜಿಲ್ಲಾ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ಹೇಳಿದ್ದ ವೈದ್ಯರು. ರಕ್ತ ತರಲು ಸೂಚಿಸಿದ್ದ ವೈದ್ಯರು, ನಂತರ ತಾಯಿ ಮಗುವಿನ ಸಾವಿನ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾರೆ. ಕವಿತಾ ಅಂಜುಟಗಿ ಸಾವನ್ನಪ್ಪಿದ ತಾಯಿ, ಜೊತೆಗೆ ಮಗು ಕೂಡ ಸಾವು ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಿರುವ ಮೃತ ಮಹಿಳೆಯ ತಾಯಿ ಕಮಲಾಬಾಯಿ ಮತ್ತು ಪತಿ ಆನಂದ ಅಂಜುಟಗಿ ವೈದ್ಯರ ನಿರ್ಲಕ್ಷವೇ ತಾಯಿ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.