ವಿಷಾದ ವ್ಯಕ್ತ ಪಡಿಸಿದ ಎ.ಆರ್.ರೆಹಮಾನ್

ಎ ಆರ್ ರೆಹಮಾನ್ ಅವರು ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕ. ಅಂತವರಿಗೇ ಅವಕಾಶಗಳ ಕೊರತೆಯಾಗುತ್ತಿದೆ ಎಂದರೆ ಆಶ್ಚರ್ಯವಲ್ಲವೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಸಂಗೀಯ ನಿರ್ದೇಶಕನಿಗೆ ಸಿಗುವ ಸಿನೇಮಾಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಅವರು ತನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಗ್ಯಾಂಗ್ ಇದೆ. ಆದ್ದರಿಂದ ತಮಗೆ ಅವಕಾಶಗಳ ಕೊರತೆಯಾಗುತ್ತದೆ ಎಂದು ದೂರಿದ್ದಾರೆ. ರೇಡಿಯೊ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೀಗೆ ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಸಂಖ್ಯೆಯ ಬಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಅವರ “ದಿಲ್ ಬೆಚರಾ’ ಚಿತ್ರದ ಹಂಸಗೀತೆಗೆ ನಾನು ಸಂಗೀತ ಸಂಯೋಜಿಸಿದ್ದೇನೆ. ನಾನು ಒಳ್ಳೆಯ ಚಲನಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ, ಆದರೆ ಒಂದು ಗ್ಯಾಂಗ್ ಇದೆ, ಅದು ತಪ್ಪು ಗ್ರಹಿಕೆಯಿಂದಾಗಿ ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

೨೦೨೧ರ ಮಧ್ಯೆ ಬ್ರಿಟನ್ ಸಂಪೂರ್ಣ ಕೋವಿಡ್ ಮುಕ್ತ

Sun Jul 26 , 2020
೨೦೨೧ರ ಮಧ್ಯೆ ವೇಳೆಗೆ ನಾವು ಸೋಂಕು ಮುಕ್ತರಾಗುವ ಮೂಲಕ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುತ್ತೇವೆ ಎಂಬ ಭರವಸೆಯನ್ನು ಬ್ರಿಟನಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವ್ಯಕ್ತಪಡಿಸಿದ್ದಾರೆ. ಕೋವಿಡ್ ಬಾವಲಿಯಿಂದ ಹರಡಿದಿದೆಯೋ ಅಥವಾ ಪ್ಯಾಂಗೊಲಿನ್‌ನಿAದ ಬಂದಿದೆಯೋ ಅಥವಾ ಮತ್ಯಾವುದರಿಂದ ಹರಡಿದಿದೆಯೋ ತಿಳಿದಿಲ್ಲ. ಆದರೆ ಈ ಮಾರಣಾಂತಿಕ ಪಿಡುಗಿನಿಂದ ಮನು ಕುಲ ಹೈರಾಣವಾಗಿದ್ದು, ನಾನಾ ಸಮಸ್ಯೆಗಳಿಗೆ ಒಡ್ಡಿಕೊಂಡಿದೆ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಸಂಪೂರ್ಣವಾಗಿ ಇದರಿಂದ ಹೊರ ಬರಬಹುದಾಗಿದ್ದು, ಮುಂದಿನ ವರ್ಷದ […]

Advertisement

Wordpress Social Share Plugin powered by Ultimatelysocial