ರಾಜ್ಯ ಸರ್ಕಾರ ಈಗ ಜನ ಹಾಗೂ ರೈತ ವಿರೋಧಿಯಾಗಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನ ಬದುಕಿನ ಜತೆ ಹೋರಾಡುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷ ಹಾಗೂ ಮುಖಂಡು ಜನರ ಸಮಸ್ಯೆಗೆ ಸ್ಪಂದಿಸದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಸಿಎಂ ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ. ಜನಪರ, ರೈತಪರ ಕಾಯ್ದೆಯನ್ನು ತಿದ್ದಲು ಹೋದ್ರೆ ನಿಮ್ಮ ಅಧಿಕಾರ ಕಳೆದುಕೊಳ್ಳುವ ದಿನ ಹೆಚ್ಚು ದೂರವಿಲ್ಲ ಎಂದರು. ಸರ್ಕಾರ ಕಾನೂನು ತಿದ್ದುಪಡಿ ಮೂಲಕ ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ಹಾಗೂ ಈಗಾಗಲೇ ಸಾಕಷ್ಟು ಉಳ್ಳವರಿಗೆ ಇನ್ನಷ್ಟು ಭೂಮಿ ಒದಗಿಸಿಕೊಡುವ ಕಾರ್ಯ ಮಾಡಲು ಮುಂದಾಗಿದೆ. ಕೊರೊನಾ ಆತಂಕದ ನಡುವೆ ರಾಜ್ಯ ಸರ್ಕಾರ ಜನರ ಸಮಸ್ಯೆಯ ಬದಲು ತನ್ನ ಸ್ವಾರ್ಥ ಸಾಧನೆಗೆ ಒಂದಾಗಿದೆ. ಇದನ್ನು ಖಂಡಿಸಿ ನಾವು ರಾಜ್ಯಾದ್ಯಂತ ಜನಜಾಗೃತಿ ಹಾಗೂ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಸಿಎಂ ಬಿಎಸ್ವೈ ವಿರುದ್ಧ ಉಗ್ರಪ್ಪ ಗರಂ
Please follow and like us: