ಇಷ್ಟು ದಿನ ಸೈಲೆಂಟ್ ಆಗಿ ಇದ್ದ ವರುಣ , ಇದ್ದಕ್ಕಿದಂತೆ ಹಲವೆಡೆ ರಾತ್ರಿಯಿಂದ ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿಯೇ ಇದೆ. ಮಳೆರಾಯ ಸಾಕಷ್ಟು ಸಮಸ್ಯೆಗಳನ್ನೇ ಸೃಷ್ಟಿಸಿದ್ದು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರಿಗೆ ಮಳೆರಾಯ ಸಂಕಷ್ಟವನ್ನು ಉಂಟುಮಾಡಿದ್ದಾನೆ. ಈಗ ಮತ್ತೆ ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಜನರ ಜೀವನ ಅಸ್ತವ್ಯಸ್ಥಗೊಂಡಿದೆ.
ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು , ರಸ್ತೆ ಮಾರ್ಗವಾಗಿ ತೆರಳುತಿದ್ದ ವಾಹನಗಳಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದ್ದು. ಇದೀಗ ವಾಹನ ಸವಾರರು ಪರದಾಡುವಂತಾಗಿದೆ.
ಡಾಲರ್ಸ್ ಕಾಲೋನಿ, ಪ್ಯಾಲೇಸ್ ಗುಟ್ಟಹಳ್ಳಿ, ಚಲ್ಲಘಟ್ಟದ ಮುಖ್ಯರಸ್ತೆ, ಪರಪ್ಪನ ಅಗ್ರಹಾರದ ರಾಯಲ್ ಕಂಟ್ರಿ ಲೇಜೌಟ್, ಕೋಡಿ ಚಿಕ್ಕನಹಳ್ಳಿ, ಮಲ್ಲೇಶ್ವರ, ಮೆಜೆಸ್ಟಿಕ್, ರಾಜಾಜಿನಗರ, ಬನಶಂಕರಿ, ಜಯನಗರ, ಆರ್.ಆರ್ ನಗರ, ವಿಜಯನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದ್ದು, ಜನರ ಪರಿಸ್ಥಿತಿ ಅಯೋ ಮಯವಾಗಿದೆ.