ದಾಸರಹಳ್ಳಿ ಸಮೀಪದ ದಾಸನಪುರ ಹೋಬಳಿಯ ಮಾದಾವರ ಗ್ರಾಮದ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಲೋಕಾಯ್ತಕ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ ಅಧಿಕಾರಿಗಳು ತೆರವು ಕಾರ್ಯ ಮಾಡಿಲ್ಲ. ಕೂಡಲೇ ಅಧಿಕಾರಿಗಳು ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ತಿಪ್ಪನಹಳ್ಳಿ ಟಿ.ಎನ್ ರಾಮಕೃಷ್ಣಪ್ಪ ಒತ್ತಾಯಿಸಿದ್ದಾರೆ. ದಾಸನಪುರ ಹೋಬಳಿ ಮಾದಾವರ ಕೆರೆಯ ಸುಮಾರು 75ರಿಂದ 80 ಎಕರೆಗಳಷ್ಟಿದ್ದು ಅದರಲ್ಲಿ 20ಎಕರೆಗೂ ಹೆಚ್ಚು ಜಾಗವನ್ನು ಜಿಂದಾಲ್ ಕಂಪನಿ ಒತ್ತುವರಿ ಮಾಡಿಕೊಂಡಿದೆ. ಈ ಬಗ್ಗೆ 2009ರಲ್ಲಿ ಲೋಕಾಯುಕ್ತ ಕೋರ್ಟ್ ಗೆ ದಾವೆ ಹೂಡಲಾಗಿತ್ತು. ಸುಮಾರು ಹತ್ತು ವರ್ಷಗಳ ಕಾಲ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್ 2018ರಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತೀರ್ಪು ನೀಡಿತ್ತು. ತೀರ್ಪು ಬಂದು ಎರಡು ವರ್ಷ ಕಳೆದರೂ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಿಲ್ಲ ಎಂದು ತಿಪ್ಪನಹಳ್ಳಿ ಟಿ.ಎನ್.ರಾಮಕೃಷ್ಣಪ್ಪ ಹೇಳಿದ್ದಾರೆ.
ಸುಮಾರು ೭೫ ರಿಂದ ೮೦ ಎಕರೆಗಳಷ್ಟಿರುವ ಮಾದವಾರ ಕೆರೆ
Please follow and like us: