ಸುಮಾರು ೭೫ ರಿಂದ ೮೦ ಎಕರೆಗಳಷ್ಟಿರುವ ಮಾದವಾರ ಕೆರೆ

ದಾಸರಹಳ್ಳಿ ಸಮೀಪದ  ದಾಸನಪುರ ಹೋಬಳಿಯ ಮಾದಾವರ ಗ್ರಾಮದ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಲೋಕಾಯ್ತಕ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೆ ಅಧಿಕಾರಿಗಳು ತೆರವು ಕಾರ್ಯ ಮಾಡಿಲ್ಲ. ಕೂಡಲೇ ಅಧಿಕಾರಿಗಳು ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು  ತಿಪ್ಪನಹಳ್ಳಿ ಟಿ.ಎನ್ ರಾಮಕೃಷ್ಣಪ್ಪ ಒತ್ತಾಯಿಸಿದ್ದಾರೆ.  ದಾಸನಪುರ ಹೋಬಳಿ ಮಾದಾವರ ಕೆರೆಯ ಸುಮಾರು 75ರಿಂದ 80 ಎಕರೆಗಳಷ್ಟಿದ್ದು ಅದರಲ್ಲಿ 20ಎಕರೆಗೂ ಹೆಚ್ಚು  ಜಾಗವನ್ನು ಜಿಂದಾಲ್ ಕಂಪನಿ  ಒತ್ತುವರಿ ಮಾಡಿಕೊಂಡಿದೆ. ಈ ಬಗ್ಗೆ 2009ರಲ್ಲಿ ಲೋಕಾಯುಕ್ತ ಕೋರ್ಟ್ ಗೆ  ದಾವೆ ಹೂಡಲಾಗಿತ್ತು. ಸುಮಾರು ಹತ್ತು ವರ್ಷಗಳ ಕಾಲ ವಾದ-ವಿವಾದಗಳನ್ನು ಆಲಿಸಿದ ಕೋರ್ಟ್ 2018ರಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತೀರ್ಪು ನೀಡಿತ್ತು. ತೀರ್ಪು ಬಂದು ಎರಡು ವರ್ಷ ಕಳೆದರೂ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಿಲ್ಲ ಎಂದು ತಿಪ್ಪನಹಳ್ಳಿ ಟಿ.ಎನ್.ರಾಮಕೃಷ್ಣಪ್ಪ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ

Sat Jul 25 , 2020
ಕೆಲ ದಿನಗಳ ಹಿಂದಷ್ಟೇ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವ ಬಗ್ಗೆ ಸುದೀಪ್ ಹೇಳಿಕೊಂಡಿದ್ದರು. ಅದರಂತೆ ಹೈದರಾಬಾದ್ ಪ್ರಯಾಣ ಬೆಳೆಸಿದ್ದ ಸುದೀಪ್, ಮೊದಲ ದಿನದ ಶೂಟಿಂಗ್ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಸರ್ಪೈಸ್ ಉಡುಗೊರೆ ನೀಡಿದ್ದರು. ಇನ್ನೊಂದು ಉಡುಗೊರೆ ನೀಡುವ ಬಗ್ಗೆಯೂ ಕಿಚ್ಚ ಹೇಳಿಕೊಂಡಿದ್ದರು, ಅದರಂತೆ ವಿಡಿಯೋ ಬಿಡುಗಡೆ ಆಗಿದೆ. ಬೃಹತ್ ಕಾಡಿನ ಹಿನ್ನೆಲೆಯಲ್ಲಿ ಸುದೀಪ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸದ್ಯ ಈ ಹೊಸ ವಿಡಿಯೋ ಕುತೂಹಲಕ್ಕೆ ಕಾರಣವಾಗಿದೆ. Please […]

Advertisement

Wordpress Social Share Plugin powered by Ultimatelysocial