ಸ್ವಚ್ಛಂದಕ್ಕೆ ಹೆಸರುವಾಸಿಯಾಗಿರುವ ಹಾಗೂ ರಾಜ್ಯದಲ್ಲಿ ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ. ಈ ಸುಂದರ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಕಾಲುವೆಗಳು ಹಾಗೂ ರಾಜಕಾಲುವೆಗಳು ಇಲ್ಲ.ಮತ್ತು ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಮರ್ಪಕವಾಗಿ ಕೊಳಚೆ ನೀರು ಹೋಗಲು ಯಾವುದೇ ಸುಸ್ಥಿತಿ ಅಕ್ರಮ ಕೈಗೊಂಡಿಲ್ಲ. ಇದಕ್ಕೆ ಉದಾಹರಣೆ ಅರಸೀಕೆರೆಯ ಪ್ರಸಿದ್ಧ ಜುಮ್ಮಾ ಮಸೀದಿ ರಸ್ತೆಯ, ಹಾಸನದ ನಾಗಭೂಷಣ್ ಆಸ್ಪತ್ರೆಯ ಪಕ್ಕದಲ್ಲಿರುವ ರಾಜಕಾಲುವೆ ,ಸಿದ್ದರಾಮೇಶ್ವರ ಸಮುದಾಯ ಭವನದ ಎಡಭಾಗ ಹಾಗೂ ಬಲಭಾಗದಲ್ಲಿರುವ ರಸ್ತೆಗಳು. ಹೀಗೆ ಹತ್ತಾರು ರಸ್ತೆಗಳು ಜಲಾವೃತಗೊಂಡು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವ ಎದುರು ಕಾಣುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ನಗರಸಭೆಯ ಅಧಿಕಾರಿಗಳು, ಇನ್ನಾದರೂ ಇದನ್ನು ಸರಿಪಡಿಸಿ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ
ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ
Please follow and like us: