5 ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ. ಬೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ

ಭೀಮಾ ತೀರದಲ್ಲಿ ಕಳೆದ ಐದು ದಶಕಗಳಿಂದ ನಡೆದುಕೊಂಡು ಬಂದಿದ್ದ ದ್ವೇಷಪೂರಿತ ವಾತಾವರಣಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅಂತ್ಯ ಹಾಡಿದ್ದಾರೆ. ಬೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ ನಡೆಸಿದ್ದು, ಈ ಮೂಲಕ 5 ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.

 

ಭೀಮಾ ತೀರದ ಚಡಚಣ ತಾಲೂಕಿನ ಉಮರಾಣಿಯ ಮಹಾದೇವ ಭೈರಗೊಂಡ ಹಾಗೂ ಮಲ್ಲಿಕಾರ್ಜುನ ಚಡಚಣ ಕುಟುಂಬಗಳ ನಡುವೆ ದಶಕಗಳಿಂದ ಪರಸ್ಪರ ದ್ವೇಷವಿದ್ದು, ಇದರಿಂದಾಗಿ ಹತ್ತಾರು ಕೊಲೆಗಳು ನಡೆದಿದ್ದವು. ಈಗ ಎಡಿಜಿಪಿ ಅಲೋಕ್ ಕುಮಾರ್ ಪ್ರಯತ್ನದಿಂದಾಗಿ ಶಾಂತಿ ನೆಲೆಸುವಂತಾಗಿದೆ.

ಬುಧವಾರದಂದು ಚಡಚಣದಲ್ಲಿ ಶಾಂತಿ ಸಭೆ ಕರೆದಿದ್ದ ಎಡಿಜಿಪಿ ಅಲೋಕ್ ಕುಮಾರ್, ಮಹಾದೇವ ಭೈರಗೊಂಡ ಹಾಗೂ ವಿಮಲಾ ಬಾಯಿ ಚಡಚಣ ನಡುವೆ ಸಂಧಾನ ನಡೆಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ.

Thu Feb 16 , 2023
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರೆ, ಇಂದು ನೀವು ಸಾಲ ಪಡೆಯಬಹುದು. ಸ್ನೇಹಿತರು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಉತ್ತಮ ಸಲಹೆ ನೀಡುತ್ತಾರೆ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ನೀವು ಸಮಾಧಾನ ಪಡೆಯುವಿರಿ. ಇದು […]

Advertisement

Wordpress Social Share Plugin powered by Ultimatelysocial