74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಸ್ ವಿ ಶ್ರೀನಿವಾಸ್ ಬುಡಗಪ್ಪ ಮಾತನಾಡಿ,ಪ್ರಪಂಚದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನೀಡುವ ಜತೆಗೆ ಶಾಂತಿಯಿಂದ ಬದುಕುವ ಅವಕಾಶ ಮಾಡಿಕೊಟ್ಟಿರುವ ದೇಶವೆಂಬುದು ಇದ್ದರೆ ಅದು ಭಾರತ ದೇಶದಲ್ಲಿ ಮಾತ್ರವಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಅವರ ಅನುಯಾಯಿಗಳ ಎಷ್ಟು ಪ್ರಮುಖರಾಗಿದ್ದಾರೆ ಅದೇ ರೀತಿಯಲ್ಲಿ ದೇಶಕ್ಕೆ ಭದ್ರ ಸಂವಿಧಾನ ನೀಡುವ ಮೂಲಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕೂಡ ಪ್ರಮುಖರಾಗಿದ್ದಾರೆ ಎಂದರು.ಸರ್ಜಾಪುರದ ಪಟ್ಟಣದ ಡಾ,ಬಿ,ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಆಯೋಜಿಸಿದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ಇನ್ನೂ ಇದೇ ವೇಳೆ ವಿವಿಧ ಶಾಲೆಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಸಾಧಕರನ್ನು ಗುರುತಿಸಿ ಅಭಿನಂದಿಸಿದರು,ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾನ್ ಖಾನ್,ಕಾರ್ಯದರ್ಶಿ ನಂಜಾರೆಡ್ಡಿ,ಸದಸ್ಯರಾದ ಎ.ಸತೀಶ್ ಕುಮಾರ್,ಗಣೇಶ್, ಅನಿಲ್ ರೆಡ್ಡಿ,ವಿಜಯ್ ಶೇಖರ್, ಶಿವಕುಮಾರ್,ಲಲಿತಮ್ಮ, ಕಲಾವತಿ ಮೂರ್ತಿ ಕುಮಾರ್, ಗಾಯಿತ್ರಿ ಪ್ರಸಾದ್,ವೀಣಾ, ಚಿನ್ನು ರಾಮಸ್ವಾಮಿ,ಸರಸ್ವತಿ, ಶಹಾಜನ್ ಉನ್ನೀಸಾ ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ‌ ಜಂಟಿ ಸುದ್ದಿಗೋಷ್ಠಿ.

Fri Jan 27 , 2023
  ಧಾರವಾಡದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ‌ ಜಂಟಿ ಸುದ್ದಿಗೋಷ್ಠಿ ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ಪ್ರಲ್ಹಾದ ಜೋಶಿಯವರ ಪ್ರಯತ್ನ, ಅಮಿತ್ ಷಾ ಸಹಕಾರದಿಂದ ವಿಧಿ ವಿಜ್ಞಾನ ವಿವಿ ಬಂದಿದೆ ಇಡೀ‌ ಜಗತ್ತಿಯಲ್ಲಿ ಎಲ್ಲಿಯೂ ವಿಧಿವಿಜ್ಞಾನ ವಿವಿ ಇರಲಿಲ್ಲ ಮೋದಿಯವರು ಗುಜರಾತ್‌ನಲ್ಲಿ ಸಿಎಂ ಇದ್ದಾಗ ಮೊದಲ ವಿವಿ ಆಯ್ತು ಜಗತ್ತಿನ ಮೊದಲ ವಿಧಿವಿಜ್ಞಾನ ವಿವಿ ಗುಜರಾತ್‌ನಲ್ಲಿ ಮಾಡಿದ್ದಾರೆ ಈ ವಿವಿ ಈಗ ಕೇಂದ್ರೀಯ ವಿವಿಯಾಗಿ ಬದಲಾವಣೆಯಾಗಿದೆ ಹೀಗಾಗಿ […]

Advertisement

Wordpress Social Share Plugin powered by Ultimatelysocial