ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಸ್ ವಿ ಶ್ರೀನಿವಾಸ್ ಬುಡಗಪ್ಪ ಮಾತನಾಡಿ,ಪ್ರಪಂಚದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನೀಡುವ ಜತೆಗೆ ಶಾಂತಿಯಿಂದ ಬದುಕುವ ಅವಕಾಶ ಮಾಡಿಕೊಟ್ಟಿರುವ ದೇಶವೆಂಬುದು ಇದ್ದರೆ ಅದು ಭಾರತ ದೇಶದಲ್ಲಿ ಮಾತ್ರವಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಅವರ ಅನುಯಾಯಿಗಳ ಎಷ್ಟು ಪ್ರಮುಖರಾಗಿದ್ದಾರೆ ಅದೇ ರೀತಿಯಲ್ಲಿ ದೇಶಕ್ಕೆ ಭದ್ರ ಸಂವಿಧಾನ ನೀಡುವ ಮೂಲಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕೂಡ ಪ್ರಮುಖರಾಗಿದ್ದಾರೆ ಎಂದರು.ಸರ್ಜಾಪುರದ ಪಟ್ಟಣದ ಡಾ,ಬಿ,ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಆಯೋಜಿಸಿದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ಇನ್ನೂ ಇದೇ ವೇಳೆ ವಿವಿಧ ಶಾಲೆಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಸಾಧಕರನ್ನು ಗುರುತಿಸಿ ಅಭಿನಂದಿಸಿದರು,ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾನ್ ಖಾನ್,ಕಾರ್ಯದರ್ಶಿ ನಂಜಾರೆಡ್ಡಿ,ಸದಸ್ಯರಾದ ಎ.ಸತೀಶ್ ಕುಮಾರ್,ಗಣೇಶ್, ಅನಿಲ್ ರೆಡ್ಡಿ,ವಿಜಯ್ ಶೇಖರ್, ಶಿವಕುಮಾರ್,ಲಲಿತಮ್ಮ, ಕಲಾವತಿ ಮೂರ್ತಿ ಕುಮಾರ್, ಗಾಯಿತ್ರಿ ಪ್ರಸಾದ್,ವೀಣಾ, ಚಿನ್ನು ರಾಮಸ್ವಾಮಿ,ಸರಸ್ವತಿ, ಶಹಾಜನ್ ಉನ್ನೀಸಾ ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.
https://play.google.com/store/apps/details?id=com.speed.newskannada