ಅಥಣಿ ಘಟಕದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಂದ ಪೋಲಿಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡಿದ ಪೋಲಿಸ್ ಸಿಬ್ಬಂದಿಗೆ ಕಣ್ಣಲ್ಲಿ ರಕ್ತ ಬರುವ ರಿತಿ ಥಳಿಸಿದ್ದಾರೆ.ಅಥಣಿ ಬಸ್ಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಜಮಖಂಡಿ ಯಿಂದ ಅಥಣಿಗೆ ಬಂದ ಪೋಲಿಸ್ ಸಿಬ್ಬಂದಿ ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡುತ್ತಿದ್ದಂತೆ ಅಥಣಿ ಘಟಕದ ka 42 F 419 ವಾಹನ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 15 ಕ್ಕೂ ಅಧಿಕ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಪೋಲಿಸ್ ಸಿಬ್ಬಂದಿ ಗೀರಮಲ್ಲ ಆಜೂರ ಮಾಹಿತಿ ನೀಡಿದ್ದಾರೆ.
ಇನ್ನೂ ಹಲ್ಲೆಗೊಳಗಾದ ಪೋಲಿಸ್ ಸಿಬ್ಬಂದಿ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು ಬೆಳಗಾವಿಯಲ್ಲಿ ಡಿಆರ್ ಪೋಲಿಸ್ ಸಿಬ್ಬಂದಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಹಲ್ಲೆಗೊಳಗಾದ ವ್ಯಕ್ತಿ ಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.