ಡಿಸಿಎಂ ಸವದಿ ತವರಲ್ಲೆ ಗೂಂಡಾಗಿರಿ- ಪ್ರಶ್ನೆ ಮಾಡಿದ ಪೊಲೀಸ್ ಗೆ ಥಳಿತ

ಅಥಣಿ ಘಟಕದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಂದ ಪೋಲಿಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕೋಡಿಯಲ್ಲಿ  ನಡೆದಿದೆ.  ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡಿದ ಪೋಲಿಸ್ ಸಿಬ್ಬಂದಿಗೆ ಕಣ್ಣಲ್ಲಿ ರಕ್ತ ಬರುವ ರಿತಿ ಥಳಿಸಿದ್ದಾರೆ.ಅಥಣಿ ಬಸ್ಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಜಮಖಂಡಿ ಯಿಂದ ಅಥಣಿಗೆ  ಬಂದ ಪೋಲಿಸ್ ಸಿಬ್ಬಂದಿ ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡುತ್ತಿದ್ದಂತೆ ಅಥಣಿ ಘಟಕದ ka 42 F 419  ವಾಹನ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 15 ಕ್ಕೂ ಅಧಿಕ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಪೋಲಿಸ್ ಸಿಬ್ಬಂದಿ  ಗೀರಮಲ್ಲ ಆಜೂರ ಮಾಹಿತಿ ನೀಡಿದ್ದಾರೆ.

ಇನ್ನೂ ಹಲ್ಲೆಗೊಳಗಾದ ಪೋಲಿಸ್ ಸಿಬ್ಬಂದಿ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು ಬೆಳಗಾವಿಯಲ್ಲಿ ಡಿಆರ್ ಪೋಲಿಸ್ ಸಿಬ್ಬಂದಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇನ್ನೂ ಹಲ್ಲೆಗೊಳಗಾದ ವ್ಯಕ್ತಿ ಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಈಗಿನಿಂದಲೇ ಬಿಜೆಪಿ ಪಕ್ಷದ ಸಿದ್ಧತೆ ಆರಂಭ

Sun Aug 2 , 2020
ಭಾರತೀಯ ಜನತಾ ಪಕ್ಷ ೨೦೨೩ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದ್ರೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ೨೦೧೮ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ,ಮಿಷನ್-೧೫೦ ಎಂಬ ಸೂತ್ರ ಇಟ್ಟುಕೊಂಡಿತ್ತು. ಈಗ ೨೦೨೩ರ ಚುನಾವಣೆಗ ಮಿಷನ್ ೨೦೦ ಸೂತ್ರ ನಿಗದಿ ಮಾಡಿಕೊಳ್ಳು ನಿರ್ಧಾರ ಮಾಡಿದೆ.ಮುಂದಿನ ಎಲೆಕ್ಷನ್‌ಗೆ ಸಿಎಂ ಅಭ್ಯರ್ಥಿ ಸಮುದಾಯ ಹಾಗೂ ಪ್ರಾಂತ್ಯದ ಆಧಾರದ ಮೇಲೆ ಗುರಿ ನಿಗದಿಪಡಿಸಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದೆ ಕರ್ನಾಟಕವನ್ನು ಕರಾವಳಿ […]

Advertisement

Wordpress Social Share Plugin powered by Ultimatelysocial