ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಮೃಧುಧೋರಣೆ ತೊರುತ್ತಿದೆ ಭಾಲ್ಕಿಯಲ್ಲಿ. ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಬಿಜೆಪಿ ನಾಯಕರ ವಿರುದ್ದ ಕಿಡಿ ಕಾರಿದ್ದಾರೆ.ಬೀದರ್ ನಲ್ಲಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು ಯುವಕರನ್ನು ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ ಗೆ ಕರೆದೊಯ್ಯಲಾಗಿದೆ,ಕೊರೊನಾ ಹಿನ್ನೆಲೆ, ಅವರ ಸ್ಥಿತಿ ಪರದೇಶದಲ್ಲಿ ಅತಂತ್ರವಾಗಿದೆ.. ಅವರ ವೀಸಾ ಅವಧಿ ಮುಗಿದು, ಊಟಕ್ಕೂ ಪರದಾಡುತ್ತಿದ್ದಾರೆ.ಕರೆದೊಯ್ದವರು ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ ಆರೋಪ ಕೇಳಿ ಬಂದಿವೆ.
ಕುವೈತ್ ನಲ್ಲಿ ಸಿಲುಕಿದ ಯುವಕರು ನನ್ನೊಂದಿಗೆ ವಿಡಿಯೊ ಮೂಲಕ ನೇರವಾಗಿ ಸಂಪರ್ಕಿಸಿದ್ದಾರೆ. ವಾಟ್ಸ್ ಅಪ್ ನಲ್ಲೂ ವಿಡಿಯೋ ಹರಿಬಿಟ್ಟಿದ್ದಾರೆ. ಇದೆಲ್ಲ ಗಮನಕ್ಕಿದ್ದರೂ ಸರ್ಕಾರ ಏನು ಮಾಡುತ್ತಿವೆ? ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ ? ಮೋಸ ಮಾಡಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.