ಮತ್ತೋರ್ವ ನಟಿಯ ನಿಗೂಢ ಸಾವು- ಇನ್‌ಸ್ಟಾದಲ್ಲಿ ಖುಷಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ನೇಣು! ಬಾಯ್‌ಫ್ರೆಂಡ್‌ ಜತೆ ಆದದ್ದೇನು?

ಕೋಲ್ಕತಾ: ಹಿರಿತೆರೆ, ಕಿರುತೆರೆ ನಟ-ನಟಿಯರ ನಿಗೂಢ ಸಾವಿನ ಸರಣಿ ಮತ್ತೆ ಮುಂದುವರೆದಿದೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌, ನಟಿ ಶ್ರೀದೇವಿ ಅವರ ಸಾವಿನ ಬೆನ್ನಲ್ಲೇ ಹಲವಾರು ನಟ-ನಟಿಯರು ಮೃತಪಟ್ಟಿದ್ದಾರೆ. ಹಲವಕ್ಕೆ ಖಿನ್ನತೆಯೇ ಕಾರಣ ಎಂದು ಹೇಳಲಾಗುತ್ತಿದ್ದರೂ ಕೆಲವು ಸಾವು ನಿಗೂಢವಾಗಿಯೇ ಉಳಿದಿವೆ.

ಈಗ ಈ ನಿಗೂಢಗಳ ಸಾಲಿನಲ್ಲಿ ಇದೀಗ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಸರದಿ.

ಶನಿವಾರ (ಮೇ 15) ಸಂಜೆ ದಕ್ಷಿಣ ಕೋಲ್ಕತಾದ ಅಪಾರ್ಟ್​​ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಈ ನಟಿ. ಇದು ಆತ್ಮಹತ್ಯೆಯೆಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಇದು ಆತ್ಮಹತ್ಯೆಯೋ, ಕೊಲೆಯೋ ಎನ್ನುವುದು ನಿಗೂಢವಾಗಿದೆ. ಇದಕ್ಕೆ ಕಾರಣ ಸಾಯುವ ಸ್ವಲ್ಪ ಮುನ್ನ ಬಾಯ್‌ಫ್ರೆಂಡ್‌ ಜತೆ ಈಕೆ ಇದ್ದುದು!

ಈಕೆ ಕಳೆದ ಒಂದೂವರೆ ವರ್ಷಗಳಿಂದ ಸಗ್ನಿಕ್‌ ಚಕ್ರವರ್ತಿ ಎನ್ನುವವರ ಜತೆಗೆ ವಾಸವಾಗಿದ್ದರು. ಕಳೆದ ಫೆಬ್ರುವರಿಯಲ್ಲಿ ದಕ್ಷಿಣ ಕೋಲ್ಕತಾದ ಗಾರ್ಫಾ ಪ್ರದೇಶದಲ್ಲಿ ಅಪಾರ್ಟ್​​ಮೆಂಟ್ ಬಾಡಿಗೆಗೆ ಪಡೆದಿದ್ದು ಅದರಲ್ಲಿಯೇ ಇಬ್ಬರೂ ನೆಲೆಸಿದ್ದರು. ಆತ್ಮಹತ್ಯೆ ಮಾಡಿಕೊಂಡ ಹಿಂದಿನ ರಾತ್ರಿ ಇಬ್ಬರ ನಡುವೆ ಭಾರಿ ಜಗಳವಾಗಿದೆ ಎನ್ನಲಾಗಿದೆ. ಸಿಟ್ಟಿನಿಂದ ಸಗ್ನಿಕ್‌ ಮನೆ ಬಿಟ್ಟು ಹೊರಗೆ ಹೋಗಿದ್ದಾನೆ. ಆತ ಬರುವಷ್ಟರಲ್ಲಿ ಪಲ್ಲವಿ ನೇಣುಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ. ತಾನು ಹೊರಗೆ ಹೋಗಿ ಮನೆಗೆ ಬಂದು ನೋಡಿದಾಗ ಪಲ್ಲವಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಸಗ್ನಿಕ್‌ ಹೇಳಿಕೆ ಕೊಟ್ಟಿದ್ದು, ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಿಜವಾಗಿಯೂ ಈತ ಹೇಳುತ್ತಿರುವುದು ನಿಜವೆ? ಒಂದು ವೇಳೆ ನಿಜವೇ ಆಗಿದ್ದರೆ ಏಕಾಏಕಿ ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಇಬ್ಬರ ನಡುವೆ ಆದ ಮಾತುಕತೆ ಏನು ಎಂಬಿತ್ಯಾದಿ ಪ್ರಶ್ನೆಗಳು ಈಗ ಹುಟ್ಟುಹಾಕಿಕೊಂಡಿವೆ.

ಈ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ಕೈಗೊಂಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣಗಳು ಇರಲಿಲ್ಲ. ಏಕೆಂದರೆ ಕೆಲವೇ ಗಂಟೆಗಳ ಮೊದಲು ಮೋಮೋಸ್‌ ತಿಂದಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದ ಪಲ್ಲವಿ, ನಾನು ತುಂಬಾ ಎಂಜಾಯ್‌ ಮಾಡುತ್ತಿದ್ದೇನೆ, ನಗರವನ್ನು ಸುತ್ತಹಾಕಿಕೊಂಡು ಬಂದು ಮೋಮೋಸ್‌ ಸವಿದಿದ್ದೇನೆ ಎಂದು ಬರೆದುಕೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರಿಷತ್‍ ಚುನಾವಣೆ : ವಿಜಯೇಂದ್ರಗೆ ಸಿಗುತ್ತಾ ವರಿಷ್ಠರ ಅನುಮತಿ..?

Mon May 16 , 2022
    ಬೆಂಗಳೂರು,ಮೇ16- ಸಾಕಷ್ಟು ಕಸರತ್ತು ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಸರನ್ನು ವಿಧಾನಪರಿಷತ್‍ಗೆ ಕಳುಹಿಸಿಕೊಟ್ಟಿದ್ದು, ವರಿಷ್ಠರು ಅನುಮತಿ ನೀಡಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಮಂಥನ ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಕುಟುಂಬ ರಾಜಕಾರಣವನ್ನು ಅನಾದಿಕಾಲದಿಂದಲೂ ಟೀಕಿಸುತ್ತಾ ಬಂದಿರುವ ಬಿಜೆಪಿಗೆ ಕಾಂಗ್ರೆಸ್‍ನ ಈ ದೀಢೀರ್ ನಿರ್ಧಾರ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ವೇಳೆ […]

Advertisement

Wordpress Social Share Plugin powered by Ultimatelysocial