ದತ್ತಾತ್ರೇಯ ಅರಳಿಕಟ್ಟೆ ಅವರು ಸಲಾಖೆಗೊಂಬೆಯಾಟದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಕಲಾವಿದರು.ದತ್ತಾತ್ರೇಯ ಅರಳಿಕಟ್ಟೆ 1953ರ ಫೆಬ್ರವರಿ 22ರಂದು, ಶೃಂಗೇರಿ ಸಮೀಪದ ಅರಳೀಕಟ್ಟೆ ಎಂಬಲ್ಲಿ ಜನಿಸಿದರು. ತಂದೆ ಅರಳೀಕಟ್ಟೆ ರಾಮರಾಯರು ಮತ್ತು ತಾಯಿ ಲಲಿತಮ್ಮನವರು.ದತ್ತಾತ್ರೇಯರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ., ಬಿ.ಎಡ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಎಡ್. ಪದವಿ ಪಡೆದು ಆಧ್ಯಾಪನ ನಡೆಸಿದರು. ಜೊತೆಗೆ ಗೊಂಬೆಯಾಟದಲ್ಲಿನ ಅಪಾರ ಸಾಧನೆ ಅವರ ಜೊತೆ ಜೊತೆಗೆ ಸಾಗಿ ಬಂತು.ವಿದ್ಯಾರ್ಥಿ ದೆಸೆಯಿಂದಲೇ ದತ್ತಾತ್ರೇಯ ಅವರಿಗೆ ರಂಗಭೂಮಿಯ ನಂಟು ಬೆಳೆಯಿತು. ಜೊತೆಗೆ ಗೊಂಬೆಯಾಟದ ಬಗ್ಗೆ ಅಪಾರ ಆಸಕ್ತಿ ಬೆಳೆಯಿತು. ಸುಮಾರು 8-10 ಕೆ.ಜಿ. ತೂಗುವ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೊಳಪಡಿಸಿ, ಸಂಗೀತ, ನೃತ್ಯ, ನಾಟಕದ ಮತ್ತು ಸರಳ ಮಾತುಗಾರಿಕೆಗಳ ಮೂಲಕ ನೋಡುಗರಿಗೆ ಕಥಾನಕವನ್ನು ಬಿಂಬಿಸುವ ಕಲೆಯಲ್ಲಿ ದತ್ತಾತ್ರೇಯ ಅವರದು ಬಹು ದೊಡ್ಡ ಸಾಧನೆ. ಗೊಂಬೆಯಾಟ ಕಲೆಯ ಮಹಾನ್ ಸಾಧಕರಾದ ಎಂ.ಆರ್. ರಂಗನಾಥ್ರಾವ್ ಅವರೇ ಇವರ ಗುರುಗಳು.ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಗೊಂಬೆಯಾಟದ ಕರಿತು ಸಂಶೋಧನೆ ನಡೆಸಿದ ದತ್ತಾತ್ರೇಯರು ಸ್ಥಾಪಿಸಿದ್ದು ‘ಪುತ್ಥಳಿ’ ಕಲಾರಂಗ. ಒಂದು ಕಾಲದಲ್ಲಿ ಮನೆಮನೆಯ ಮಾತಾಗಿದ್ದ ಗೊಂಬೆಯಾಟ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಾ ಬಂತು. ಈ ಪುರಾತನ ಕಲೆಯನ್ನು ಜೀವಂತವಾಗಿರಿಸಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಆ ನಿಟ್ಟಿನಲ್ಲಿ ಪುತ್ಥಳಿ ಕಲಾರಂಗ ಸಂಚಾರಿ ಸೂತ್ರಗೊಂಬೆಯಾಟ ಮಾಡಿರುವ ರಂಗಶಾಲೆಯ ಕೆಲಸ ಮಹತ್ವದ್ದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: