ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ವಾಡಿ ಪಶು ಆಸ್ಪತ್ರೆ ಆಯೋಜಿಲಾದ ಪಶುಗಳಿಗೆ ಚಿಕಿತ್ಸಾ ಶಿಬಿರದ ಸಭೆ ಉದೇಶಿಸಿ ಅವರು ಮಾತನಾಡಿದರು. ಪಶುಗಳಿಗೆ ಮಾರಾಕ ರೋಗ ಹರಡುವ ಮುಂಚೆ ಎಚ್ಚೆತ್ತುಕೊಳ್ಳಬೇಕು, ಮಾರಾಕ ರೋಗಗಳಿಗೆ ಪಶುಗಳು ತುತ್ತಾದರೆ ಬಾರಿ ಅನಾಹುತಕ್ಕೆ ಕಾರಣವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಮಾರಾಕ ರೋಗ ಹರಡುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಮರವಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ ದೇಶಮುಖ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸದಸ್ಯ ಅಯ್ಯಪ್ಪ ಎಮ್, ಶಹಾಬಾದ ಪಶು ಆಸ್ಪತ್ರೆಯ ಸಹಾಯ ನಿರ್ದೇಶಕ ನೀಲಪ್ಪ ಪಾಟೀಲ, ವಾಡಿ ಪಶು ಆಸ್ಪತ್ರೆಯ ಸಂಗಮೇಶ ಬಿರಾದಾರ, ನ್ಯಾಯವಾದಿ ಶರಣಗೌಡ ಮಾಲಿ ಪಾಟೀಲ, ಗ್ರಾಮದ ಮುಖಂಡರಾದ ಬಸವರಾಜಗೌಡ ದೇಶಮುಖ, ಸಿದ್ದು ಪೂಜಾರಿ, ಶೇಖಪ್ಪ ಬಡಿಗೇರ, ಮಾಲಿಕಯ್ಯ ಗುತ್ತೆದಾರ ಸೇರಿದಂತೆ ಇನ್ನಿತರರು ಇದ್ದರು.
ಸಂಗಪ್ಪ ದಂಡಿನ