ಇಂದು ಬಿಡುಗಡೆಯಾಗಲು ನಿರ್ಧರಿಸಿದ್ದಂತ ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳ ಬಳಿಯಲ್ಲಿ ಅನೇಕ ಅಭಿಮಾನಿಗಳು ದಾಂದಲೆ ನಡೆಸಿದ್ದರು. ಇದರಿಂದಾಗಿ ತಮ್ಮ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಕ್ಷಮೆಯನ್ನು ಕೋರಿದ್ದಾರೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವಂತ ನಟ ಕಿಚ್ಚ ಸುದೀಪ್ ಅವರು, ಬಾಬುವರು ಅಪ್ ಲೋಡ್ ಮಾಡಿದಂತ ವೀಡಿಯೋ ನೋಡಿದೆ. ಬಾಬು ನೀವು ಯಾರಿಂದ ತೊಂದ್ರೆಗೆ ಸಿಲುಕಿಕೊಂಡ್ರಿ ಅಂತ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕಾಲ ಉತ್ತರ ಕೊಡಲಿದೆ. ನಿಮ್ಮೊಂದಿಗೆ ನಾವಿದ್ದೇವೆ. ನಾಳೆಯಿಂದ ಭರ್ಜರಿ ಪ್ರದರ್ಶನ ಕಾಣಲಿದೆ. ಯಾವುದೇ ಅಭಿಮಾನಿಗಳು ಆವೇಶಕ್ಕೆ ಒಳಗಾಗಬಾರದು. ಚಿತ್ರಮಂದಿರಗಳನ್ನು ಹಾನಿ ಮಾಡಬಾರದು. ಚಿತ್ರಮಂದಿರಗಳ ಮಾಲೀಕರದ್ದು ಯಾವುದೇ ತಪ್ಪಿಲ್ಲ. ಇವತ್ತು ಒಂದಿನ ಆಗಿರುವಂತ ಸಮಸ್ಯೆಗೆ ಕ್ಷಮೆ ಇರಲಿ ಎಂದಿದ್ದಾರೆ.
ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗದ ಹಿನ್ನಲೆ : ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹೇಳಿದ್ದೇನು.?
Please follow and like us: