ಚಿಕ್ಕೋಡಿ ಜಿಲ್ಲಾ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ, ಇದೂವರೆಗೆ ಯಾರೊಬ್ಬ ಜನಪ್ರತಿನಿಧಿಯು ಇತ್ತಕಡೆಗೆ ಹಾದಿಲ್ಲ, ರೊಚ್ಚಿಗೆದ್ದ ಹೋರಾಟಗಾರರು ಚಿಕ್ಕೋಡಿ ಉಪವಿಭಾಗದ ಸಂಸಧ-ಶಾಸಕರ ಭಾವಚಿತ್ರಗಳನ್ನು ಧಹನ ಮಾಡಿ ಅಕ್ರೋಶ ವ್ಯಕ್ತ ಪಡಿಸಿದರು, ಈ ಸಂಧರ್ಭದಲ್ಲಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಕಾಶೀನಾಥ ಕುರಣಿ ಮಾತನಾಡಿ, ಎಷ್ಟೊಂದು ದುರ್ದೈವ ನೋಡಿ, ಆರೋಗ್ಯ ಸಚಿವರು ಕಾರಿನಿಂದ ಕೆಳಗಿಳಿಯಲಿಲ್ಲ, ಈ ಸಚಿವರ ಕಾರಿನಲ್ಲಿ ನಮ್ಮ ಭಾಗದ ಶಾಸಕ ಗಣೇಶ ಹುಕ್ಕೇರಿ ಇವರೂ ಸಹ ಇದ್ದರು, ಇವರೂ ಸಹ ಕಾರಿನಿಂದ ಕೆಳಗಿಳಿಯಲಿಲ್ಲ, ಇವರೂ ಸಹ ನಮ್ಮ ಕ್ಷೇತ್ರದ ಜನರ ಅವಮಾನ ಮಾಡಿದ್ದಾರೆ, ಮುಂಬರುವ ದಿನಗಳಲ್ಲಿ ಈ ಸರಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕೆಂದು ಹೇಳಿದರು, ಚಿಕ್ಕೋಡಿ ಜಿಲ್ಲೆ ಆಗದಿದ್ದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ಬೇಡುವ ಸ್ಥಿತಿ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, ಈ ಸಂಧರ್ಭದಲ್ಲಿ ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಸುನೀಲ ಮಾಳಿ, ಈರಗೌಡಾ ಕೆಳಗಿನಮನಿ, ಯಾಶೀನ ಜಮಾದಾರ, ಸೂರಜ ಜಮಾದಾರ, ಶ್ರೀಕಾಂತ ಅಸೋದೆ, ಬಸವರಾಜ ಸಾಜನೆ, ಸಂಜಯ ಪಾಟೀಲ, ರುದ್ರಯ್ಯಾ ಹಿರೇಮಠ, ರಮೇಶ ಕರನೂರೆ, ,ಪ್ರತಾಪ ಪಾಟೀಲ, ಕೃಷ್ಣಾ ಕೆಂಚನ್ನವರ, ಕುಮಾರ ಪಾಟೀಲ, ಸಿದ್ದು ಅಪ್ಪಾಜಿಗೋಳ, ಮುಂತಾದವರು ಉಪಸ್ಥಿತರಿದ್ದರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada