LATEST NEWS : ಕನ್ನಡ ಭಾಷೆಗಾಗಿ ಪ್ರಾಣ ನೀಡಲೂ ಸಿದ್ಧ: ನಟ ಶಿವರಾಜ್‌ಕುಮಾರ್‌

ಕನ್ನಡ ಭಾಷೆಗಾಗಿ ಪ್ರಾಣ ನೀಡಲೂ ಸಿದ್ಧ: ನಟ ಶಿವರಾಜ್‌ಕುಮಾರ್‌

ಬೆಂಗಳೂರು: ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆ ಕುರಿತಂತೆ ನಟ ಶಿವರಾಜ್‌ಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ‘ಮತಬ್ಯಾಂಕ್‌ಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು.

ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಮ್ಮ ಭಾಷೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧ’ ಎಂದಿದ್ದಾರೆ.

ನಟ ಧನಂಜಯ್‌ ಅವರು ನಟಿಸಿರುವ ‘ಬಡವ ರಾಸ್ಕಲ್‌’ ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ಧ್ವಜ ಸುಟ್ಟ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಟ್ವೀಟ್‌ ಮಾಡಿದೆ. ಟ್ವೀಟ್‌ ಮಾಡುವುದು ಈಗ ಫ್ಯಾಷನ್‌ ಆಗಿದೆ. ಕೇವಲ ಟ್ವೀಟ್‌ ಮಾಡುವುದರಿಂದ ಪ್ರಯೋಜನವಿಲ್ಲ. ನನಗೇನೂ ಸಾಯಬೇಕೆಂಬ ಆಸೆ ತಾಯಾಣೆಗೂ ಇಲ್ಲ. ಇನ್ನೂ ನೂರು ವರ್ಷ ಬದುಕಬೇಕೆಂದು ಆಸೆ ಪಡುತ್ತೇನೆ. ಜೀವ ಎನ್ನುವುದು ಒಂದು ಕೊಡುಗೆ. ಆದರೆ ನಮ್ಮ ಭಾಷೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧರಿದ್ದೇವೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜನಗರದ ಸುಭ್ರಮಣ್ಯ ಸ್ವಾಮಿ ದೇವಸ್ಥಾನಲ್ಲಿ 5 ನೇ ವರ್ಷದ ಆರಾಧನಾ ಮಹೋತ್ಸವ

Mon Dec 20 , 2021
ಚಾಮರಾಜನಗರದ ಗೂಳಿಪುರ ಗ್ರಾಮದ ಸುಭ್ರಮಣ್ಯ ಸ್ವಾಮಿ ದೇವಸ್ಥಾನಲ್ಲಿ 5 ನೇ ವರ್ಷದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು….ಗ್ರಾಮದಲ್ಲಿ ಸುಭ್ರಮಣ್ಯ ಸ್ವಾಮಿಯ ಉತ್ಸವವನ್ನು ನಡೆಸಿ. ನಂತರ ಅನ್ನ ಸಂತರ್ಪಣೆಯನ್ನು ಗ್ರಾಮಸ್ಥರು ಏರ್ಪಡಿಸಿದರು..ಆರಾಧನಾ ಮಹೋತ್ಸವಕ್ಕೆ ಹೊಂಡರಬಾಳು ಮಠದ ನೀಲಕಂಠಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿ ಮಾತನಾಡಿದರು..ಗ್ರಾಮಸ್ಥರು 3 ವರ್ಷಗಳಿಂದ ಈ ಅನ್ನ ಸಂತರ್ಪಣೆ ಮಾಡಿಕೊಂಡು ಬರುತ್ತಿದ್ದು, ದೇವಸ್ಥಾನದ ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಆಗಲಿ ಎಂದು ಆರೈಸಿದರು…ಕೋವಿಡ್ ಕಾರಣದಿಂದ ಭಕ್ತರು ಎಲ್ಲಾ […]

Advertisement

Wordpress Social Share Plugin powered by Ultimatelysocial