ಹೈದ್ರಾಬಾದ್ : ಮಗ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಬಲವಾದ ಕಾರಣವೇನು ಎಂಬುದನ್ನು ನಾಗಚೈತನ್ಯ ತಂದೆ ನಾಗಾರ್ಜುನ ಅಕ್ಕಿನೇನಿ ಬಹಿರಂಗ ಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮಂತಾ ವಿಚ್ಛೇದನಕ್ಕೆ ಮೊದಲು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ನಾಗಚೈತನ್ಯ ತನ್ನ ಮಾಜಿ ಪತ್ನಿಯ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಚೈತನ್ಯ ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು. ನಾನು ಏಲ್ಲಿ ಈ ವಿಷಯವನ್ನು ಕೇಳಿ ಯೋಚಿಸುತ್ತೇನೆ, ತನ್ನ ಕುಟುಂಬದವರಿಗೆ ಎಲ್ಲಿ ಘಾಸಿ ಆಗುತ್ತದೆ ಅಂತ ತನ್ನಲ್ಲಿಯೇ ಕೊರಗುತ್ತಿದ್ದರು ಎಂದು ಹೇಳಿದರು.ವಿಚ್ಛೇದನದ ನಂತರ ಅವರು ನಾನು ಚಿಂತಿತನಾಗಿದ್ದೇನೆ ಅಂತ ನನಗೆ ತುಂಬಾ ಸಾಂತ್ವನ ಹೇಳಿದರು. ಅವರಿಬ್ಬರೂ ಮದುವೆ ಜೀವನ ದಲ್ಲಿ 4 ವರ್ಷಗಳಿಂಂದ ಜೊತೆಯಾಗಿದ್ದರು. ಆದರೆ ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಅವರಿಬ್ಬರ ನಡುವೆ ವಿಚ್ಛೇದನದ ವಿಷಯ ಹೇಗೆ ಬಂದಿತು ಅಂತ ನನಗೆ ತಿಳಿದಿಲ್ಲ. ಅವರಿಬ್ಬರು ಈ ನಿರ್ಧಾರಕ್ಕೆ ಬರುವ ಮುನ್ನ 2021 ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ್ದರು. ಅದರ ಬಳಿಕ ಸಮಸ್ಯೆಗಳು ಉದ್ಭವಿಸಿವೆ ಅಂತ ತೋರುತ್ತದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada