ರಾಜ್ಯದಲ್ಲಿ ಒಂದೇ ಒಂದು ಮುಕ್ತ ವಿವಿ ಮಾಡುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿದರು, ಕರ್ನಾಟಕ ಮುಕ್ತ ವಿವಿ ಮಾತ್ರವೇ ಅಧಿಕೃತವಾಗಿ ಕೆಲಸ ಮಾಡುತ್ತದೆ. ಸೆಂಟ್ರಲ್ ವಿವಿಯನ್ನು ಬೆಂಗಳೂರು ಸಿಟಿ ವಿವಿಯಾಗಿ ಮಾಡಿದ್ದೇವೆ, ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ಸ್ವರೂಪ ನೀಡುತ್ತಿದ್ದೇವೆ, ನೃಪತುಂಗ ವಿವಿ ಎಂದು ಮಾಡುತ್ತೇವೆ. ಇನ್ನು ವಿವಿಗಳಿಗೆ ವಿಷೇಶಾಧಿಕಾರಿಗಳ ನೇಮಕಕ್ಕೆ ಒಪ್ಪಿಗೆಯಾಗಿದೆ, ಮಹಾರಾಣಿ ಕ್ಲಸ್ಟರ್,ಮಂಡ್ಯ ಕ್ಲಸ್ಟರ್ ವಿವಿಗಳಿಗೆ ವಿಷೇಶಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕ ಮುಕ್ತ ವಿವಿ ಮಾತ್ರವೇ ಅಧಿಕೃತ..
Please follow and like us: