ಕೆಲವು ದಿನಗಳ ಹಿಂದಷ್ಟೆ ರಾಜ್ಯಾದಂತ ರೈತರಿಗೆ ತೀವ್ರ ಭೀತಿ ಹುಟ್ಟಿಸಿದ್ದ ಮಿಡತೆಗಳು ಇದೀಗ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಲಗ್ಗೆಯಿಟ್ಟು ಮತ್ತೊಮ್ಮೆ ಆತಂಕ ಮೂಡಿಸಿವೆ. ಕಳೆದೆರಡು ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯಿಂದ ಮಿಡತೆಗಳು ಮರಳಿ ದಾಳಿ ಮಾಡುತ್ತಿವೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ ಮಾಹಿತಿ ನೀಡಿದೆ. ಅದಲ್ಲದೇ ಉತ್ತರ ಪ್ರದೇಶದ ಪ್ರಯಾಗ್ ರಾಜ್, ಮಹಾರಾಷ್ಟ್ರದ ನಾಗ್ಪುರ ಹಾಗೂ ರಾಜಸ್ಥಾನದ ಹಲವೆಡೆ ಮಿಡತೆಗಳು ಮತ್ತೊಮ್ಮೆ ದಾಳಿ ಮಾಡುವ ಮೂಲಕ ರೈತರಿಗೆ ಹೊಸ ಸಂಕಷ್ಟಕ್ಕೀಡು ಮಾಡಿವೆ. ಇನ್ನು ಜುಲೈ ಮಧ್ಯದ ವೇಳೆಯಲ್ಲಿ ಮತ್ತೊಮ್ಮೆ ಮಿಡತೆಗಳು ದಾಳಿಯಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆಯಾ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯಾದಾಂತ ಮತ್ತೆ ಕಾಣಿಸಿಕೊಂಡ ಮಿಡತೆ ಸಂಕಷ್ಟಕ್ಕೀಡಾದ ರೈತರು
Please follow and like us: