ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎರಡನೇ ಅವಧಿಯ ಮೊದಲನೆ ವರ್ಷವನ್ನು ಸಾಕಷ್ಟು ಸವಾಲುಗಳ ನಡುವೆ ಯಶಸ್ವಿಯಾಗಿ ಪೂರೈಸಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂವಿಧಾನದ ೩೭೦ನೆ ವಿಧಿ ರದ್ದು, ಪೌರತ್ವ ತಿದ್ದುಪಡಿ ವಿಧೇಯಕ-೨೦೦೯, ತ್ರಿವಳಿ ತಲಾಕ್, ಕರ್ತಾರ್ಪುರ್ ಕಾರಿಡಾರ್ ಯೋಜನೆ, ಬ್ರೂರಿಯಾಂಗ್ ಒಪ್ಪಂದ, ಮೂರು ಸೇನಾ ಪಡೆಗಳಿಗೆ ಮುಖ್ಯಸ್ಥರ ನೇಮಕ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ದೇಶದ ಜನರ ಅನೇಕ ಕನಸನ್ನು ಕೇಂದ್ರ ಸರ್ಕಾರ ನನಸಾಗಿಸಿದೆ. ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ ಯೋಜನೆಯನ್ನು ೧ ಕೋಟಿಗೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದರೆ, ಅಟಲ್ ಪೆನ್ಷನ್ ಯೋಜನೆಯಡಿ ಕಳೆದ ೫ ವರ್ಷಗಳಿಂದ ೨.೨೩ ಕೋಟಿ ಮಂದಿಯ ನೋಂದಣಿಯಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ೧೬.೫ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನ ನೀಡಲಾಗಿದೆ. ಅಟಲ್ ಭೂಜಲ ಯೋಜನೆಯಡಿ ೭ ರಾಜ್ಯಗಳ ೮೩೫೦ ಹಳ್ಳಿಗಳು ಪ್ರಯೋಜನ ಪಡೆದಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅನೇಕ ಜನರ ಕನಸು ನನಸಾಗಿಸಿದೆ
Please follow and like us: