ಹನೂರು ಪಟ್ಟಣದ ನಿವಾಸಿ ವಿನೋದ್ ಕುಮಾರ್ ಮೃತ ಯುವಕ. ಈತ ಮಾ.17ರಂದು ಮನೆಯಲ್ಲಿದ್ದ ತನ್ನ ರೂಮ್ನೊಳಗೆ ವಿಷ ಕುಡಿದಿದ್ದಾನೆ. ವಿಷಯ ತಿಳಿದ ಮನೆಯವರು ಈತನನ್ನು ಕೊಳ್ಳೇಗಾಲದ ಆಸ್ಪತ್ರೆಗೆ ಸೇರಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿನೋದ್ ಶುಕ್ರವಾರ ಮೃತಪಟ್ಟಿದ್ದಾನೆ.
ಈತನಿಗೆ ಐವರು ಅಣ್ಣಂದಿರು, ಒಬ್ಬಳು ತಂಗಿ ಇದ್ದಾಳೆ. ಇವರೆಲ್ಲರಿಗೂ ಮದುವೆಯಾಗಿದೆ. ವಿನೋದ್ಗೆ ಮಾತ್ರ ವಿವಾಹವಾಗಿರಲಿಲ್ಲ. ಇದೇ ಬೇಸರದಲ್ಲಿ ಕುಡಿಯೋದು ಕಲಿತ. ಹನೂರು ಅರಣ್ಯ ಇಲಾಖೆ ಕಚೇರಿಯಲ್ಲಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಕೆಲಸ ಕಳೆದುಕೊಂಡ. ನಂತರ ಬೆಂಗಳೂರಲ್ಲಿ ಫ್ಯಾಕ್ಟರಿಯಲ್ಲೂ ದುಡಿಯಲಾಗದೆ ಊರಿಗೆ ಮರಳಿದ್ದ. ಮದುವೆ ಆಗದ ಬೇಸರ, ಜೀವನದಲ್ಲಿ ಜಿಗುಪ್ಸೆ ಬಂದು ಪೇಂಟ್ ಜೊತೆಗೆ ವಿಷ ತಂದು ರೂಂ ಒಳಗೆ ಹೋಗಿ ಕುಡಿದ್ದಾನೆ ಎಂದು ಮೃತನ ತಂದೆ ಸಿದ್ದಯ್ಯ ಹನೂರು ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada