ಮದುವೆಯಾಗದ ಚಿಂತೆ‌; ಬಣ್ಣ ಬಳಿಯೋ ನೆಪದಲ್ಲಿ ಕೋಣೆಗೆ ಹೋಗಿ ವಿಷ ಕುಡಿದು ಸತ್ತ..

 

 

 

ಚಾಮರಾಜನಗರ:‌ ವಯಸ್ಸು 34 ಅಷ್ಟೇ.. ನೋಡಲು ಸ್ಫುರದ್ರೂಪಿ. ಇನ್ನೂ ಮದುವೆ ಆಗಿರಲಿಲ್ಲ.‌. ಮಾಡೋಕೆ‌ ಕೆಲಸವೂ ಇರಲಿಲ್ಲ. ಈ ಬೇಸರದಲ್ಲೇ ಕುಡಿತದ ಚಟಕ್ಕೆ ದಾಸನಾದ ಯುವಕನೊಬ್ಬ ಮನೆಯಲ್ಲಿದ್ದ ತನ್ನ ರೂಮ್​ಗೆ ಬಣ್ಣ ಬಳಿಯುತ್ತೇನೆ ಎಂದು ಸುಳ್ಳು ಹೇಳಿ ಒಳಗೆ ಸೇರಿಕೊಂಡು ವಿಷ ಕುಡಿದು ಆಸ್ಪತ್ರೆಯಲ್ಲಿ ಸತ್ತಿದ್ದಾನೆ.

 

ಹನೂರು ಪಟ್ಟಣದ ನಿವಾಸಿ ವಿನೋದ್ ಕುಮಾರ್ ಮೃತ ಯುವಕ. ಈತ ಮಾ.17ರಂದು ಮನೆಯಲ್ಲಿದ್ದ ತನ್ನ ರೂಮ್​ನೊಳಗೆ ವಿಷ ಕುಡಿದಿದ್ದಾನೆ. ವಿಷಯ ತಿಳಿದ ಮನೆಯವರು ಈತನನ್ನು ಕೊಳ್ಳೇಗಾಲದ ಆಸ್ಪತ್ರೆಗೆ ಸೇರಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿನೋದ್ ಶುಕ್ರವಾರ ಮೃತಪಟ್ಟಿದ್ದಾನೆ.

ಈತನಿಗೆ ಐವರು ಅಣ್ಣಂದಿರು, ಒಬ್ಬಳು ತಂಗಿ ಇದ್ದಾಳೆ. ಇವರೆಲ್ಲರಿಗೂ ಮದುವೆಯಾಗಿದೆ.‌ ವಿನೋದ್​ಗೆ ಮಾತ್ರ ವಿವಾಹವಾಗಿರಲಿಲ್ಲ. ಇದೇ ಬೇಸರದಲ್ಲಿ ಕುಡಿಯೋದು ಕಲಿತ. ಹನೂರು ಅರಣ್ಯ ಇಲಾಖೆ ಕಚೇರಿಯಲ್ಲಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಕೆಲಸ ಕಳೆದುಕೊಂಡ. ನಂತರ ಬೆಂಗಳೂರಲ್ಲಿ ಫ್ಯಾಕ್ಟರಿಯಲ್ಲೂ ದುಡಿಯಲಾಗದೆ ಊರಿಗೆ ಮರಳಿದ್ದ.‌ ಮದುವೆ ಆಗದ ಬೇಸರ, ಜೀವನದಲ್ಲಿ‌ ಜಿಗುಪ್ಸೆ ಬಂದು ಪೇಂಟ್​ ಜೊತೆಗೆ ವಿಷ ತಂದು ರೂಂ ಒಳಗೆ ಹೋಗಿ ಕುಡಿದ್ದಾನೆ ಎಂದು‌ ಮೃತನ‌ ತಂದೆ ಸಿದ್ದಯ್ಯ‌ ಹನೂರು ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಮಕೂರು: ಕುಡಿದ ಅಮಲಿನಲ್ಲಿ ತೂರಾಡುತ್ತಲೇ ಶಾಲೆಗೆ ಬಂದ ಶಿಕ್ಷಕ ಅಮಾನತು

Sat Mar 19 , 2022
ತುಮಕೂರು: ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಮದ್ಯ ಸೇವಿಸಿ ತೂರಾಡುತ್ತಲೇ ಶಾಲೆಗೆ ಬಂದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.ಕಾಂತರಾಜ್ ಅಮಾನತುಗೊಂಡಿರುವ ಶಿಕ್ಷಕ. ಈತ ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಮದ್ಯಸೇವಿಸಿ ಶಾಲೆಗೆ ಬಂದಿರುವ ವಿಚಾರ ಗ್ರಾಮಸ್ಥರ ಗಮನಕ್ಕೆ ಬರುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ ಪೋಷಕರು, ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕುಣಿಗಲ್ ಬಿಇಒ […]

Advertisement

Wordpress Social Share Plugin powered by Ultimatelysocial