ಉತ್ತರ ಕನ್ನಡದಲ್ಲಿ ವರುಣನ ಅಬ್ಬರ ಕೊಂಚ ಕಡಿಮೆಯಾಗಿದೆ..ಮಳೆ ಕಡಿಮೆಯಾದ್ರೂ ಕುಮಟ, ಹೊನ್ನಾವರ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಆತಂಕ ತಣ್ಣಗಾಗಿಲ್ಲ.
ಧಾರಾಕಾರ ಮಳೆಯಿಂದ ಅಘನಾಶಿನಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ..ಕೊನ್ನಳ್ಳಿ, ಊರಕೇರಿ,ಮೂರೂರು ಗ್ರಾಮದಲ್ಲಿ ಮನೆಗಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.
ಇನ್ನು, ತೋಟ, ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿ ಕೃಷಿ ಜಮೀನುಗಳು ಜಲಾವೃತಗೊಂಡಿವೆ..ಇತ್ತ, ಹಾವೇರಿ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗ್ತಿದ್ದು, ನೋಡು ನೋಡುತ್ತಿದ್ದಂತೆ ಮನೆಯ ಗೋಡೆ ಕುಸಿದು ಬಿದ್ದಿದೆ..
ಹಿರೆಕೇರೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬೃಹತ್ ಗೋಡೆ ಕುಸಿತಕ್ಕೆ
ಸುಮಾರು 1 ಲಕ್ಷ ಮೌಲ್ಯದ ಬೈಕ್ಗಳು ಜಖಂಗೊಂಡಿವೆ..ಮನೆಗೋಡೆ ಕುಸಿಯುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: