ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದಗ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಳೆಯಿಂದ ಚರಂಡಿ ತುಂಬಿ ಹರಿದು ಗ್ರಂಥಾಲಯದ ಒಳಗೆ ನೀರು ನುಗ್ಗಿದ್ದು,ಪುಸ್ತಕಗಳು ಚರಂಡಿ ನೀರಿಗೆ ನೆನೆದು ಹಾಳಾಗಿವೆ.
ಗ್ರಂಥಾಲಯದ ಸಮಸ್ಯೆ ಕುರಿತು ಗ್ರಂಥಪಾಲಕರು ಗ್ರಾ.ಪಂಗೆ ಪತ್ರ ಬರೆದಿದ್ದರು ಮನವಿಗೆ ಗ್ರಾಮಪಂಚಾಯತಿ ಸ್ಪಂದಿಸುತ್ತಿಲ್ಲ.ಗ್ರಂಥಾಲದಲ್ಲಿ ಚರಂಡಿ ನೀರು ಉಕ್ಕುತ್ತಿರುವುದರಿಂದ ಗ್ರಂಥಾಲಯ ದ ಹೊರಗಡೆ ಪುಸ್ತಕವನ್ನು ಬಿಸಿಲಿಗೆ ಒಣ ಹಾಕುವ ಪರಿಸ್ಥಿತಿ ಎದುರಾಗಿದೆ.