ನಮ್ಮ ಕ್ಲಿನಿಕ್ ಎನ್ನುವ ಯೋಜನೆ ವಿಶೇಷವಾಗಿ ನಗರದಲ್ಲಿರುವ ಬಡವರ ಬಡಾವಣೆಯಲ್ಲಿರುವ ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸದರು. ನಾವು ಚಿಕ್ಕವರಿದ್ದಾಗ ಬಡವರ ಬಡಾವಣೆಗಳಲ್ಲಿ ಆಸ್ಪತ್ರೆ ಇತ್ತು. ಎಂಬಿಬಿಎಸ್ ಡಾಕ್ಟರ್ಗಳಿದ್ರು. ಬಡಾವಣೆ ಜನರಿಗೆ ಏನಾದ್ರೂ ಇದ್ರೆ ಅವರು ಟೆಸ್ಟ್ ಮಾಡಿ ಚಿಕಿತ್ಸೆ ನೀಡ್ತಾ ಇದ್ರು. ಈಗ ಅಂತಹ ಆಸ್ಪತ್ರೆ ಶೆಕಡಾ 90 ಕಡಿಮೆ ಆಘಿದೆ. ಮಹಾನಗರ ಪಾಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಬಡಜನರಿಗೆ ಆರೋಗ್ಯ ಸಮಸ್ಯೆ ಬಂದ್ರೆ ಕಿಮ್ಸ್ ಇಲ್ಲಾ ಅಂದ್ರೆ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗಬೇಕು . ಬಡವರಿಗೆ ಸಾಧ್ಯ ಇಲ್ಲ ಹಾಗಾಗಿ ಬಡವರಿಗೆ ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ ನೀಡುವ ಅವಶ್ಯಕತೆ ಸರ್ಕಾರಕ್ಕಿತ್ತು. ಹವಾಮನದ ಬದಲಾವಣೆಯಿಂದ ಜ್ವರ, ನೆಗಡಿ, ಕೆಮ್ಮು ರೋಗದ ಬಗ್ಗೆ ಜಾಗೃತಿ ಮೂಡಿಸೋದು ಈ ಎಲ್ಲಾ ಕಾರಣಗಳಿಂದ ನಮ್ಮ ಕ್ಲಿನಿಕ್ ಪ್ರಾರಂಭ ಮಾಡಿದೀವಿ. ಜನಸ್ಪಂದನಾ ಸರ್ಕಾರ ಮಾತ್ರ ಇದನ್ನ ಮಾಡೋದಕ್ಕೆ ಸಾಧ್ಯ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada