ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆ (ಗುರುವಾರ) ಸಂಜೆ ಉತ್ತರ ಪ್ರದೇಶದಿಂದ ಹರಿಯಾಣದ ಪಾಣಿಪತ್ ಜಿಲ್ಲೆಯನ್ನು ಪ್ರವೇಶಿಸಿತು. ಸನೋಲಿ ಖುರ್ದ್ ಗ್ರಾಮದಲ್ಲಿ ರಾತ್ರಿ ಕಳೆಯಬೇಕಿದ್ದ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಮತ್ತೆ ದೆಹಲಿಗೆ ಧಾವಿಸಿದರು.ಈ ವಿಚಾರವನ್ನು ಕಾಂಗ್ರೆಸ್ನ ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ‘ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.ಈ ಯಾತ್ರೆಯು ಸ್ವಲ್ಪ ಸಮಯದ ಹಿಂದೆ (ನಿನ್ನೆ ಸಂಜೆ) ಹರಿಯಾಣವನ್ನು ಪ್ರವೇಶಿಸಿತು. ಆದರೆ ಸೋನಿಯಾ ಅಸ್ವಸ್ಥರಾಗಿದ್ದರಿಂದ ರಾಹುಲ್ ಇಂದು ರಾತ್ರಿ ದೆಹಲಿಗೆ ತೆರಳಬೇಕಾಯಿತು. ಅವರು ಇಂದು ರಾತ್ರಿಯನ್ನು ಹರಿಯಾಣದಲ್ಲಿ ಕಳೆಯುವುದಿಲ್ಲ. ಆದರೆ ನಾಳೆ (ಜನವರಿ 6) ಬೆಳಿಗ್ಗೆ 6 ಗಂಟೆಗೆ ಯಾತ್ರೆಯನ್ನು ಪ್ರಾರಂಭಿಸುತ್ತಾರೆ ಮತ್ತು ನಾಳೆ ಮಧ್ಯಾಹ್ನ ಪಾಣಿಪತ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಹೇಳಿದ್ದಾರೆ.ನಾಳೆಯಿಂದ (ಜನವರಿ 6 ರಿಂದ ಜನವರಿ 10 ರವರೆಗೆ) ಭಾರತ್ ಜೋಡೋ ಯಾತ್ರೆಯ ಎರಡನೇ ಹಂತದ ಆರಂಭಕ್ಕೆ ಕಾಂಗ್ರೆಸ್ನ ಹರಿಯಾಣ ಘಟಕವು ಇಂದು ಸಿದ್ಧತೆಗಳನ್ನು ಅಂತಿಮಗೊಳಿಸಿದೆ. ಉತ್ತರ ಪ್ರದೇಶದಿಂದ ಹರಿಯಾಣದ ಪಾಣಿಪತ್ಗೆ ಯಾತ್ರೆ ಇಂದು ಸಂಜೆ ಪ್ರವೇಶಿಸಲಿದೆ. ಉತ್ತರ ಪ್ರದೇಶ-ಹರಿಯಾಣ ಗಡಿ ಗ್ರಾಮವಾದ ಸನೋಲಿ ಖುರ್ದ್ಗೆ ನಿನ್ನೆ ಸಂಜೆ ಪ್ರವೇಶಿಸಿದೆ. ಹರಿಯಾಣದಲ್ಲಿ ಎರಡನೇ ಹಂತದ ಯಾತ್ರೆಯು ಇಂದು (ಶನಿವಾರ) ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿದೆ.ಸಿಎಲ್ಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಇಂದು ಸಭೆಯ ಸ್ಥಳವನ್ನು ಪರಿಶೀಲಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada