ನಿರ್ದೇಶಕ ವಂಶಿ ಪೈಡಿಪಲ್ಲಿ ಸಿನಿಮಾಗಳಲ್ಲಿ ರಿಚ್ನೆಸ್ ಅನ್ನೋದು ಯಾವಾಗಲೂ ಅಧಿಕವಾಗಿರುತ್ತದೆ. ಅವರ ಈ ಹಿಂದಿನ ‘ಮಹರ್ಷಿ’ ಸಿನಿಮಾವೇ ಸುಲಭದ ಉದಾಹರಣೆ. ಮಹೇಶ್ ಬಾಬು ಜತೆ ಮಹರ್ಷಿ ಮಾಡಿದ್ದ ವಂಶಿ ಈ ಬಾರಿ ‘ದಳಪತಿ’ ವಿಜಯ್ ಜೊತೆಗೆ ‘ವಾರಿಸು’ ಮಾಡಿದ್ದಾರೆ. ಟ್ರೇಲರ್ ನೋಡಿದವರಿಗೆ ಈ ಸಿನಿಮಾದ ಕಂಟೆಂಟ್ ಏನು ಎಂಬುದರ ಬಗ್ಗೆಯೂ ಒಂದು ಅಂದಾಜು ಸಿಕ್ಕಿರುತ್ತದೆ ಕೂಡ. ಹಾಗಾದರೆ, ಈ ಸಿನಿಮಾ ಹೇಗಿದೆ?
ದೇಶದ ಬಹುದೊಡ್ಡ ಉದ್ಯಮಿ ರಾಜೇಂದ್ರನ್ಗೆ (ಶರತ್ ಕುಮಾರ್) ಮೂವರು ಮಕ್ಕಳು. ಕೊನೇ ಮಗ ವಿಜಯ್ ರಾಜೇಂದ್ರನ್ಗೆ (ವಿಜಯ್) ಅಪ್ಪನ ಹಂಗು ಬೇಕಿಲ್ಲ. ಸ್ವಂತಃ ಕಾಲ ಮೇಲೆ ನಿಂತು ಸಾಧಿಸುವ ಆಸೆ. ಅಪ್ಪನ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾನೆ ವಿಜಯ್. ರಾಜೇಂದ್ರನ್ಗೆ ಒಂದು ಕಡೆ ಬ್ಯುಸಿನೆಸ್ ಪೈಪೋಟಿ, ಮತ್ತೊಂದೆಡೆ ಕುಟುಂಬದಲ್ಲಿನ ಒಡಕುಗಳು. ಹೀಗಿರುವಾಗ ಮಧ್ಯಂತರ ವೇಳೆಗೆ ವಿಜಯ್ ಮರಳುತ್ತಾನೆ. ಹಾಗೇ ಅವನು ವಾಪಸ್ ಬರುವುದಕ್ಕೂ ಬಲವಾದ ಕಾರಣವಿದೆ. ಅದೇನು ಅನ್ನೋದೇ ಇಂಟರೆಸ್ಟಿಂಗ್.
https://play.google.com/store/apps/details?id=com.speed.newskannada