‘ವಾರಿಸು’ ಅಂಗಳದಲ್ಲಿ ಹೊಸತನವಿಲ್ಲ, ಅದ್ದೂರಿತನವೇ ಎಲ್ಲ!

ನಿರ್ದೇಶಕ ವಂಶಿ ಪೈಡಿಪಲ್ಲಿ ಸಿನಿಮಾಗಳಲ್ಲಿ ರಿಚ್‌ನೆಸ್ ಅನ್ನೋದು ಯಾವಾಗಲೂ ಅಧಿಕವಾಗಿರುತ್ತದೆ. ಅವರ ಈ ಹಿಂದಿನ ‘ಮಹರ್ಷಿ’ ಸಿನಿಮಾವೇ ಸುಲಭದ ಉದಾಹರಣೆ. ಮಹೇಶ್‌ ಬಾಬು ಜತೆ ಮಹರ್ಷಿ ಮಾಡಿದ್ದ ವಂಶಿ ಈ ಬಾರಿ ‘ದಳಪತಿ’ ವಿಜಯ್ ಜೊತೆಗೆ ‘ವಾರಿಸು’ ಮಾಡಿದ್ದಾರೆ. ಟ್ರೇಲರ್ ನೋಡಿದವರಿಗೆ ಈ ಸಿನಿಮಾದ ಕಂಟೆಂಟ್ ಏನು ಎಂಬುದರ ಬಗ್ಗೆಯೂ ಒಂದು ಅಂದಾಜು ಸಿಕ್ಕಿರುತ್ತದೆ ಕೂಡ. ಹಾಗಾದರೆ, ಈ ಸಿನಿಮಾ ಹೇಗಿದೆ?
  ದೇಶದ ಬಹುದೊಡ್ಡ ಉದ್ಯಮಿ ರಾಜೇಂದ್ರನ್‌ಗೆ (ಶರತ್‌ ಕುಮಾರ್) ಮೂವರು ಮಕ್ಕಳು. ಕೊನೇ ಮಗ ವಿಜಯ್ ರಾಜೇಂದ್ರನ್‌ಗೆ (ವಿಜಯ್) ಅಪ್ಪನ ಹಂಗು ಬೇಕಿಲ್ಲ. ಸ್ವಂತಃ ಕಾಲ ಮೇಲೆ ನಿಂತು ಸಾಧಿಸುವ ಆಸೆ. ಅಪ್ಪನ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾನೆ ವಿಜಯ್. ರಾಜೇಂದ್ರನ್‌ಗೆ ಒಂದು ಕಡೆ ಬ್ಯುಸಿನೆಸ್‌ ಪೈಪೋಟಿ, ಮತ್ತೊಂದೆಡೆ ಕುಟುಂಬದಲ್ಲಿನ ಒಡಕುಗಳು. ಹೀಗಿರುವಾಗ ಮಧ್ಯಂತರ ವೇಳೆಗೆ ವಿಜಯ್‌ ಮರಳುತ್ತಾನೆ. ಹಾಗೇ ಅವನು ವಾಪಸ್ ಬರುವುದಕ್ಕೂ ಬಲವಾದ ಕಾರಣವಿದೆ. ಅದೇನು ಅನ್ನೋದೇ ಇಂಟರೆಸ್ಟಿಂಗ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಿಯಾದ ಚಿಕಿತ್ಸೆ ಸಿಗದೆ ಯುವಕ ಸಾವು.

Wed Jan 11 , 2023
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ. ದಾಸರಹಳ್ಳಿ ಬಳಿ ಇರುವ “ಮಧು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ಗಂಭೀರ ಆರೋಪ.? ಮೊನ್ನೆ 9 ತಾರೀಖಿನಂದು ಆಸ್ಪತ್ರೆಗೆ ಸೇರಿದ್ದ ಯುವಕ. ಎರಡು ದಿನ ಚಿಕಿತ್ಸೆ ನೀಡಿದ್ದರು ಯುವಕ ಸಾವು. ಸತೀಶ್ (25) ಸಾವನಪ್ಪಿರುವ ಯುವಕ. 9 ನೇ ತಾರೀಖು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ಸತೀಶ್. ಈ ವೇಳೆ ಸ್ನೇಹಿತರ ಮಧ್ಯೆ ಗಲಾಟೆ ಆಗಿದೆ. ಮಧ್ಯಸ್ಥಿಕೆ ವಹಿಸಿದ ಸತೀಶ್. ಬಿಯರ್ […]

Advertisement

Wordpress Social Share Plugin powered by Ultimatelysocial