ಬೆಂಗಳೂರಿನಲ್ಲಿ ಘೋರ ಘಟನೆ :

ಬೆಂಗಳೂರು : 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಅಪಾರ್ಟ್ ಮೆಂಟ್ 10ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಳನ್ನು ಸಂಜಯನಗರದ ಸಾಫ್ಟ್ವೇರ್ ಎಂಜಿನಿಯ ಅರವಿಂದ್ ಹಾಗೂ ತೇಜು ಕೌಶಿಕ್ ದಂಪತಿಯ ಪುತ್ರಿ ಪ್ರಕೃತಿ (18) ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.ಪ್ರಕೃತಿ ಚಾಲುಕ್ಯ ಸರ್ಕಲ್ ಸಮೀಪದ ಸೋಫಿಯಾ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದಳು. ಭಾನುವಾರ ಮಧ್ಯಾಹ್ನ ಹೊರಗೆ ಸುತ್ತಾಡಿಕೊ೦ಡು ಬರುವುದಾಗಿ ಹೇಳಿ ಹೊರಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಾಲುಕ್ಯ ವೃತ್ತದ ಹೈ ಪಾಯಿಂಟ್-3 ಅಪಾರ್ಟ್ಮೆಂಟ್ ಬಳಿ ಬಂದಿದ್ದಾಳೆ. ನಂತರ ಸೆಕ್ಯುರಿಟಿ ಗಾರ್ಡ್ ಗಾಗಿ ಸುಳ್ಳು ನೆಪ ಹೇಳಿ ಅಪಾರ್ಟ್ ಮೆಟ್ ಪ್ರವೇಶಿಸಿದ್ದಾಳೆ. ಬಳಿಕ ಲಿಫ್ಟ್ ಮುಖಾಂತರ 10ನೇ ಮಹಡಿ ತಲುಪಿ ಅಲ್ಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಬ೦ದ ಹೈಗೌಂಡ್ಸ್ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ಯಡಿಯೂರಪ್ಪ ನವರ ಹುಟ್ಟುಹಬ್ಬದ ಕಾರ್ಯಕ್ರಮ ಐತಿಹಾಸಿಕವಾಗಲಿದೆ.

Mon Feb 27 , 2023
ಶಿವಮೊಗ್ಗದ ಇಂದಿನ ಯಡಿಯೂರಪ್ಪ ನವರ ಹುಟ್ಟುಹಬ್ಬದ ಕಾರ್ಯಕ್ರಮ ಐತಿಹಾಸಿಕವಾಗಲಿದೆ 148 ನೇ ವಿಮಾನ ನಿಲ್ದಾಣ , ರಾಜ್ಯದ ಎರಡನೇ ಉದ್ದದ ರನೇವೇ ಇರುವ ವಿಮಾನ ನಿಲ್ದಾಣಪ್ರಪಂಚದ ಹೆಮ್ಮಯ ನಾಯಕನಿಂದ ಲೋಕಾರ್ಪಣೆ ಆಗ್ತಿದೆ ತಂದೆಯವರ ಹುಟ್ಟುಹಬ್ಬದಂದು ಲೋಕಾರ್ಪಣೆ ಮಾಡುತ್ತಿರುವ ಅತ್ಯಂತ ಹೆಮ್ಮೆಯ ವಿಚಾರ ಶಿವಮೊಗ್ಗ ಬಿಎಸ್ ವೈ ನಿವಾಸದಲ್ಲಿ ಪುತ್ರ ಬಿ ವೈ ರಾಘವೇಂದ್ರ ಹೇಳಿಕೆ 11.30 ಕ್ಕೆ ಗೌರಾವಾನ್ವಿತ ಪ್ರಧಾನಿಗಳು ಮೊದಲ ವಿಮಾನದಲ್ಲಿ ಬರುತ್ತಾರೆ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರ […]

Advertisement

Wordpress Social Share Plugin powered by Ultimatelysocial