ನಡೆದಾಡುವ ಶ್ರೀಗಳಾದ ದಿವಂಗತ ಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು ನಮ್ಮ ಭಾರತ ದೇಶದ ಒಂದು ದೀಪ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಮೈಸೂರ್ ಹುಲಿ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಇಂದು ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು, ರಾಜಕೀಯ ಮುಖಂಡರು, ಹಾಗೂ ಶಾಲಾ ಮಕ್ಕಳು ಸೇರಿಕೊಂಡು 2 ನಿಮಿಷಗಳ ಕಾಲ ಮೌನಾಚರಣೆ ನೆರವೇರಿಸಿದರು.ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವಂತಹ ಮೈಬೂಬ್ ಎಮ್ ಮನಿಯರ್ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ಪ್ರಾಥಮಿಕ ಶಿಕ್ಷಣ ವಿಜಯಪುರ, ಧಾರವಾಡ ದಲ್ಲಿ ಮುಗಿಸಿ. ವಿಜಯಪುರದ ಸಿದ್ದೇಶ್ವರ ಆಶ್ರಮದಲ್ಲಿ ವಾಸವಾಗುತ್ತಾರೇ, ಅವರು ನಡೆದ ಬಂದ ದಾರಿ ಯಾವತ್ತು ನಮ್ಮ ದೇಶಕ್ಕೆ, ನಮ್ಮ ನಾಡಿನ ಜನತೆಗೆ ಸಂದೇಶ ಪ್ರವಚನಗಳು, ನೀಡುವ ಮುಖಾಂತರ ಜಾತಿ, ಭೇದ, ಮತ, ಪಂಥ, ಮರೆತು ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ. ನಮ್ಮಲ್ಲಿ ಬೇದ ಭಾವ ಪ್ರಭು ದೂರವಾಗಲಿ ಎಂದು ಗುಮ್ಮಟ್ ನಗರಿ ಪುಸ್ತಕದಲ್ಲಿ ಉಲ್ಲೇಖಿಸಿದರು ಎಂದು ಮಾತನಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada