ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್

ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಕಂದರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶಿರಾ-ಬುಕ್ಕಾಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬಸ್ ನಲ್ಲಿದ್ದವರು ಬಂಗರಹಟ್ಟಿ ಗೊಲ್ಲರಹಟ್ಟಿಗೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಖಾಸಗಿ ಬಸ್ ನಲ್ಲಿ ಹೊರಟಿದ್ದರು. ಈ ಬಸ್ ನಲ್ಲಿ 50 ಕ್ಕೂ ಹೆಚ್ಚು ಮಂದಿ ಇದ್ದು 40 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಶಿರಾ ಬಳಿ ಇರುವ ಮೇಕೇರಹಟ್ಟಿ ಬಳಿ ತಿರುವು ಇದ್ದು, ಈ ಪ್ರದೇಶದಲ್ಲಿ ಹೆಚ್ಚು ಅನುಭವ ಇಲ್ಲದ ಚಾಲಕರಿಗೆ ದುರ್ಗಮವಾದ ಪ್ರದೇಶ ಇದಾಗಿದೆ. ಆದ ಕಾರಣ ಹೆಚ್ಚಿನ ಅಪಘಾತಗಳು ಸಂಭವಿಸುವ ಜಾಗ ಇದಾಗಿದೆ. ಗಾಯಾಳುಗಳು ಹಾಗೂ ತೀವ್ರ ಗಂಭೀರ ಸ್ಥಿತಿಯಲ್ಲಿರುವ ಓರ್ವನನ್ನು ಸಿರಾ ಹಾಗೂ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಮದ್ಯ ಸಾಗಿಸುತ್ತಿದ್ದ ಆರೋಪಿಗಳ ಬಂಧನ

Please follow and like us:

Leave a Reply

Your email address will not be published. Required fields are marked *

Next Post

ಧ್ರುವ ಕಟೋಟ್ ಮುಂದೆ 101 ತೆಂಗಿನಕಾಯಿ ಹೊಡೆದ ಅಭಿಮಾನಿಗಳು

Fri Feb 19 , 2021
ಪೊಗರು ಚಿತ್ರ ಬಿಡುಗಡೆ ಹಿನ್ನೆಲೆಯಾಗಿ  ಕೋಲಾರ ಜಿ ಲ್ಲೆಯ  ಬಂಗಾರಪೇಟೆಯಲ್ಲಿ  ಅಭಿಮಾನಿಗಳು  ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.  ಬಂಗಾರಪೇಟೆಯ ಬಾಲಚಂದರ್ ಥಿಯೇಟರ್ ಮುಂಭಾಗದಲ್ಲಿ ಧ್ರುವ ಕಟೋಟ್ ಮುಂದೆ 101 ತೆಂಗಿನಕಾಯಿ ಹೊಡೆದು ತಮಟೆ ಬೀಟ್ ಗೆ ಸ್ಟೆಪ್ಸ್ ಹಾಕಿಕೊಂಡು ಅಭಿಮಾನಿ ಕೊಂಡ್ಡಿದರು. ನೆಚ್ಚಿನ ನಾಯಕ ನಟನ ಚಿತ್ರಕ್ಕೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ನೀಡಲಾಗಿದೆ. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್ Please follow and like us:

Advertisement

Wordpress Social Share Plugin powered by Ultimatelysocial