ಆಕಸ್ಮಿಕ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ ಮೆಕ್ಕೆಜೋಳದ ತೆನೆಗಳು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಬಳಿ ಘಟನೆ.ವಿರುಪಾಕ್ಷ ಕಲ್ಲತ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲು.450 ಕ್ವಿಂಟಲ್ ಗೂ ಅಧಿಕ ಮೆಕ್ಕೆಜೋಳದ ತೆನೆಗಳು ಸುಟ್ಟು ಭಸ್ಮ ವಾಗಿದ್ದು.ಬೆಳಗಿನ ಜಾವ ಮೆಕ್ಕಜೋಳದ ತೆನೆಗಳಿಗೆ ಬೆಂಕಿ ಹೊತ್ತಿಕೊಂಡು ಘಟನೆ ನಡೆದಿದೆ.ಮೆಕ್ಕೆಜೋಳದ ತೆನೆಗಳ ರಾಶಿಯಲ್ಲಿ ಬಿಡಾರ ಹೂಡಿದ್ದ ಹಾವು ಸುಟ್ಟು ಕರಕಲು ಆಗಿರುವ ಹಾವು ಬೆಂಕಿಯಲ್ಲಿ ಸಿಕ್ಕು ಸಾವು ಬದುಕಿನ ನಡುವೆ ಹೋರಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ.ವಿಷಯ ತಿಳಿದು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada