ನಟಿ ಐಶ್ವರ್ಯಾಗೆ ಐಟಿ ಶಾಕ್.

ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ್‌ನ ತಂಗಾವ್ ಬಳಿಯ ಅಡ್ವಾಡಿಯ ಗುಡ್ಡಗಾಡು ಪ್ರದೇಶದಲ್ಲಿ ೧ ಹೆಕ್ಟೇರ್‌ಗೂ ಹೆಚ್ಚು ಜಮೀನನ್ನು ಐಶ್ವರ್ಯಾ ರೈ ಅವರು ಹೊಂದಿದ್ದು, ಈ ಆಸ್ತಿಯ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತೆರಿಗೆ ಕಟ್ಟುವಂತೆ ನೀಡಲಾಗಿದ್ದ ಗಡುವು ಮುಗಿದಿದ್ದರೂ ೨೨,೦೦೦ ರೂ. ಭೂ ಕಂದಾಯ ಪಾವತಿಸದೇ ವಂಚಿಸಿದ್ದಾರೆ, ಅಲ್ಲದೇ ನಟಿ ಐಶ್ವರ್ಯಾ ರೈನಾಸಿಕ್ ಜಿಲ್ಲಾಡಳಿತವು ಇದಕ್ಕೂ ಮುನ್ನ ಅವರಿಗೆ ತೆರಿಗೆ ಪಾವತಿ ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿತ್ತು. ಆದರೂ, ಅವರು ತೆರಿಗೆ ಪಾವತಿಸಿಲ್ಲ ಎಂದು ಮೂಲಗಳು ಹೇಳಿವೆ.ಮಾರ್ಚ್ ಅಂತ್ಯದೊಳಗೆ ತೆರಿಗೆ ಸಂಗ್ರಹದ ಶೇಕಡಾ ಪಾಲನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿ ಮಾಡದಿರುವ ಸಂಬಂಧ ಐಶ್ವರ್ಯಾ ರೈ ಸೇರಿದಂತೆ ೧೨೦೦ ಇತರ ಆಸ್ತಿ ಮಾಲೀಕರಿಗೂ ಇಲಾಖೆ ನೋಟಿಸ್ ಕೊಟ್ಟಿದೆ. ನಾಸಿಕ್ ಜಿಲ್ಲಾಡಳಿತವು ಗುಡುವಿನೊಳಗೆ ಭೂ ತೆರಿಗೆದಾರರಿಂದ ವಾರ್ಷಿಕ ಒಟ್ಟು ೧.೧೧ ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಹೊಂದಿದೆ.ಐಶ್ವರ್ಯಾ ರೈಗಮ್ ಪ್ರೈವೇಟ್ ಲಿಮಿಟೆಡ್, ಎಲ್.ಬಿ.ಕುಂಜಿರ್ ಇಂಜಿನಿಯರ್, ಐಟಿಸಿ ಮರಾಠಾ ಲಿಮಿಟೆಡ್, ಎಸ್.ಕೆ.ಶಿವರಾಜ್, ಹೋಟೆಲ್ ಲೀಲಾ ವೆಂಚರ್ ಲಿಮಿಟೆಡ್, ಕುಕ್ರೇಜಾ ಡೆವಲಪರ್ ಕಾರ್ಪೊರೇಷನ್, ರಾಮ ಹ್ಯಾಂಡಿಕ್ರಾಫ್ಟ್, ಒಪಿ ಎಂಟರ್‌ಪ್ರೈಸಸ್ ಕಂಪನಿ, ಬಿಂದು ವಾಯು ಉರ್ಜಾ ಲಿಮಿಟೆಡ್, ಏರ್ ಕಂಟ್ರೋಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್, ಚೋಟ್ಯಾಬ್ ಇಂಡಿಯಾ, ಮೆಟ್ ಜೇತಾಭಾಯಿ ಪಟೇಲ್ ಮತ್ತು ಕಂಪನಿ ಸೇರಿದಂತೆ ಒಟ್ಟು ೧೨೦೦ ಇತರ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಟನ್ ರೋಸ್‌ ಕೃಷಿಯಲ್ಲಿ ಅಧಿಕ ಆದಾಯ.

Tue Jan 17 , 2023
ಕುಕನೂರು: ರೈತರು ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಮೆಕ್ಕೆಜೋಳ, ಶೇಂಗಾ ಮತ್ತು ಹತ್ತಿಯಂಥ ಬೆಳೆಗಳನ್ನು ಬಿಟ್ಟು ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಅಂಥ ರೈತರಲ್ಲಿ ಒಬ್ಬರೂ ತಾಲ್ಲೂಕಿನ ಹೊನ್ನುಣಿಸಿ ಗ್ರಾಮದ ರೈತ ಪದವೀಧರ ದೇವೇಂದ್ರಗೌಡ ಪೊಲೀಸ್ ಪಾಟೀಲ. ದೇವೇಂದ್ರಪ್ಪ ಎಲ್ಲ ರೈತರಂತೆ ಯೋಚಿಸದೆ ತೋಟಗಾರಿಕಾ ಬೆಳೆಯಾದ ಬಟನ್ ರೋಸ್ ಬೆಳೆದಿದ್ದಾರೆ. ತಮಗಿದ್ದ ಒಂದೂ ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ಬಟನ್ ರೋಸ್ ಸಸಿ ತಂದು ಹಚ್ಚಿದ್ದಾರೆ. ಸರ್ಕಾರದ ನರೇಗಾ ಯೋಜನೆಯಿಂದ […]

Related posts

Advertisement

Wordpress Social Share Plugin powered by Ultimatelysocial