ಡೆಮಾಕ್ರಟಿಕ್ ಆಜಾದ್ ಪಾರ್ಟಿಯ ೩೦ಕ್ಕೂ ಅಧಿಕ ಸಂಸ್ಥಾಪಕ ನಾಯಕರು ಪಕ್ಷ ತ್ಯಜಿಸಿ ಮಾತೃ ಪಕ್ಷ ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.ಇತ್ತೀಚೆಗಷ್ಟೇ ಗುಲಾಬ್ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಆಜಾದ್ ಪಾರ್ಟಿಯ ಹಲವು ನಾಯಕರು ಕಾಂಗ್ರೆಸ್ ಸೇರಿ ಮಾತೃ ಪಕ್ಷದಲ್ಲಿ ಪಕ್ಷಕ್ಕೆ ಮರಳಿ ತಮ್ಮಿಂದ ತಪ್ಪಾಗಿದೆ ಎಂದಿದ್ದರು.ಇದರ ಬೆನ್ನಲ್ಲೇ ಇದೀಗ ಡೆಮಾಕ್ರಟಿಕ್ ಆಜಾದ್ ಪಕ್ಷ ಸ್ಥಾಪನೆಗೆ ಕೇಂದ್ರದ ಮಾಜಿ ಸಚಿವ ಗುಲಾಮ್ ನಬಿ ಆಜಾದ್ ಅವರಿಗೆ ಹೆಗಲು ನೀಡಿದ್ದ ೩೦ಕ್ಕೂ ಅಧಿಕ ನಾಯಕರು ಪಕ್ಷವನ್ನು ತ್ಯಜಿಸಿ ಹಳೆಯ ಗಂಡನ ಪಾದವೇ ಸರಿ ಎಂದು ಕಾಂಗ್ರೆಸ್ ಮನೆಗೆ ವಾಪಸ್ಸಾಗಿದ್ದಾರೆ.ಡೆಮಾಕ್ರಟಿಕ್ ಆಜಾದ್ ಪಕ್ಷ,ಪ್ರಧಾನ ಕಾರ್ಯದರ್ಶಿ ನಿಜಾಮ್-ಉದ್-ದಿನ್ ಖತಾನಾ ಮತ್ತು ಅದರ ಸಂಸ್ಥಾಪಕ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರುತ್ತಿರುವುದರಿಂದ ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ.ಈ ನಡುವೆ ಗುಲಾಂ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಗೆ ದೊಡ್ಡ ಹೊಡೆತ ಬಿದ್ದಿರುವ ನಡುವೆಯೇ ,ಪಕ್ಷದ ನೋಂದಣಿಗಾಗಿ ಆಜಾದ್ ಚುನಾವಣಾ ಆಯೋಗದ ಕಚೇರಿಗೆ ಭೇಟಿಯಾಗುತ್ತಿದ್ದಂತೆ ೩೦ ಕ್ಕೂ ಹೆಚ್ಚು ಡಿಎಪಿ ಸಂಸ್ಥಾಪಕ ಸದಸ್ಯರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.ಪಕ್ಷದ ನೋಂದಣಿ ಸಂಬಂಧ ಗುಲಾಮ್ ನಬಿ ಆಜಾದ್ ಅವರನ್ನು ಚುನಾವಣಾ ಆಯೋಗ ಇಂದು ಕರೆದಿದೆ ಎಂದು ಹಿರಿಯ ಡಿಎಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ.“ಪ್ರಸ್ತುತ, ನಾವು ನಮ್ಮ ಪಕ್ಷವನ್ನು ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಕರೆಯುತ್ತೇವೆ ಆದರೆ ಚುನಾವಣಾ ಆಯೋಗ ನಮಗೆ ಯಾವ ಹೆಸರನ್ನು ನೀಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.
https://play.google.com/store/apps/details?id=com.speed.newskannada