ನಕಲಿ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದ ಜ್ಯೂನಿಯರ್ ಅಸಿಸ್ಟೆಂಟ್ ವೀರೇಶ್, ಅಸಿಸ್ಟೆಂಟ್ ರಘು ಕಿರಣ್, ಜ್ಯೂನಿಯರ್ ಅಸಿಸ್ಟೆಂಟ್ ಹರೀಶ್, ಜ್ಯೂನಿಯರ್ ಎಂಜಿನಿಯರ್ ಎಂ.ಆರ್ ಶಿವಪ್ರಸಾದ್ರನ್ನು ಬಂಧಿಸಲಾಗಿದೆ. ರಕ್ಷಿತ್ ಮತ್ತು ಕಾರ್ತಿಕ್ ಇವರೂ ಕೂಡ ನಕಲಿ ದಾಖಲೆಗಳ ಆಧಾರದ ಮೇಲೆ ಅನುಕಂಪದ ಆಧಾರದ ಹುದ್ದೆ ಪಡೆದಿದ್ದು, ಈಗ ತಲೆಮರೆಸಿಕೊಂಡಿದ್ದಾರೆ. ನಕಲಿ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದವರು ಬಹುತೇಕ ಚಿತ್ರದುರ್ಗ ಮೂಲದವರಾಗಿದ್ದಾರೆ.ಚಿತ್ರದುರ್ಗ ಬೆಸ್ಕಾಂ ಉಪ ವಿಭಾಗದಲ್ಲಿ ನಕಲಿ ಅನುಕಂಪದ ದಾಖಲೆ ಸಲ್ಲಿಸಿ, ನೌಕರಿ ಪಡೆದಿದ್ದ ನಾಲ್ವರು, ನಕಲಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಓರ್ವ ಆರೋಪಿ ಹಾಗೂ ನಕಲಿ ಹುದ್ದೆಗಳನ್ನು ಪಡೆಯಲು ಸಹಕರಿಸಿದ ಆರೋಪದ ಮೇಲೆ ಮೂವರು ಬೆಸ್ಕಾಂ ಅಧಿಕಾರಿಗಳನ್ನು ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಕಲಿ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದಿರುವ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…