ಬೆಸ್ಕಾಂನಲ್ಲಿ ನಕಲಿ ದಾಖಲೆ ಸಲ್ಲಿಸಿ ಅನುಕಂಪದ ಹುದ್ದೆ ಪಡೆದ ವಂಚಕರ ಬಂಧನ.

ನಕಲಿ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದ ಜ್ಯೂನಿಯರ್‌ ಅಸಿಸ್ಟೆಂಟ್‌ ವೀರೇಶ್‌, ಅಸಿಸ್ಟೆಂಟ್‌ ರಘು ಕಿರಣ್‌, ಜ್ಯೂನಿಯರ್‌ ಅಸಿಸ್ಟೆಂಟ್‌ ಹರೀಶ್‌, ಜ್ಯೂನಿಯರ್‌ ಎಂಜಿನಿಯರ್‌ ಎಂ.ಆರ್‌ ಶಿವಪ್ರಸಾದ್‌ರನ್ನು ಬಂಧಿಸಲಾಗಿದೆ. ರಕ್ಷಿತ್‌ ಮತ್ತು ಕಾರ್ತಿಕ್‌ ಇವರೂ ಕೂಡ ನಕಲಿ ದಾಖಲೆಗಳ ಆಧಾರದ ಮೇಲೆ ಅನುಕಂಪದ ಆಧಾರದ ಹುದ್ದೆ ಪಡೆದಿದ್ದು, ಈಗ ತಲೆಮರೆಸಿಕೊಂಡಿದ್ದಾರೆ. ನಕಲಿ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದವರು ಬಹುತೇಕ ಚಿತ್ರದುರ್ಗ ಮೂಲದವರಾಗಿದ್ದಾರೆ.ಚಿತ್ರದುರ್ಗ ಬೆಸ್ಕಾಂ ಉಪ ವಿಭಾಗದಲ್ಲಿ ನಕಲಿ ಅನುಕಂಪದ ದಾಖಲೆ ಸಲ್ಲಿಸಿ, ನೌಕರಿ ಪಡೆದಿದ್ದ ನಾಲ್ವರು, ನಕಲಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಓರ್ವ ಆರೋಪಿ ಹಾಗೂ ನಕಲಿ ಹುದ್ದೆಗಳನ್ನು ಪಡೆಯಲು ಸಹಕರಿಸಿದ ಆರೋಪದ ಮೇಲೆ ಮೂವರು ಬೆಸ್ಕಾಂ ಅಧಿಕಾರಿಗಳನ್ನು ಕೋಟೆ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಕಲಿ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದಿರುವ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ನಿರುದ್ಯೋಗಿ ಯುವಜನರಿಗೆ ಗುಡ್‌ನ್ಯೂಸ್‌: ಡಿ.23ರಂದು ಚಿತ್ರದುರ್ಗದಲ್ಲಿ ಉದ್ಯೋಗ ಮೇಳ.

Wed Dec 28 , 2022
ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಇ, ಬಿಬಿಎಂ, ಎಂಬಿಎ, ಸ್ನಾತಕೋತ್ತರ ಪದವಿ ಇತರೆ ಪದವಿ ಹೊಂದಿದ ಪಾಸ್/ಫೇಲ್ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ನೇರ ಸಂದರ್ಶನದ ಪ್ರಯೋಜನ ಪಡೆಯಬಹುದಾಗಿದೆ.ನಿರುದ್ಯೋಗಿ ಯುವಕ ಯುವತಿಯರಿಗೆ […]

Advertisement

Wordpress Social Share Plugin powered by Ultimatelysocial