ಮಧ್ಯರಾತ್ರಿ 1ಕ್ಕೆ ಅಧಿಕಾರ ಸ್ವೀಕಾರ- ಅಧಿಕಾರಿಗಳ “ಒಳ್ಳೇ ಮಹೂರ್ಥ” ರಿವೀಲ್ ಮಾಡಿದ ಸಚಿವ ಸೋಮಣ್ಣ
ಚಾಮರಾಜನಗರ:ಅಧಿಕಾರಿಗಳು ಯಾವ ಪರಿ ವಾಸ್ತು ಹಾಗೂ ಒಳ್ಳೆಯ ಮಹೂರ್ಥಕ್ಕೆ ಒಳಗಾಗಿದ್ದಾರೆಂಬುದು ಇಂದು ರಿವೀಲ್ ಆಯ್ತು. ಹೌದು…, ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಸಂಬಂಧ ಸಭೆ ನಡೆಸುವ ವೇಳೆ ಅಬಕಾರಿ ಡಿಸಿ ನಾಗಶಯನ್ ಹೆಸರು ಪ್ತಸ್ತಾಪಿಸಿ ರಾತ್ರಿ 1ಕ್ಕೆ ಚಾರ್ಜ್ ತಗೊಂಡ ಪುಣ್ಯಾತ್ಮ ನೀನು, ತಡರಾತ್ರಿ ಯಾಕೆ ಅಂದ್ರೆ ಒಳ್ಳೆ ಟೈಂ ಅಂದ ಎಂದು ಅಧಿಕಾರಿಗಳ “ಮಹೂರ್ಥ ಮಹಿಮೆ” ಬಗ್ಗೆ ಕಾಲೆಳೆದರು. ಇನ್ನು, ಕಂಪ್ಯೂಟರ್ ಆಪರೇಟರ್ ಗಳಿಗೆ ಸಂಬಳ ಕೊಡದೇ ಸತಾಯಿಸುತ್ತಿದ್ದ ಶ್ರೀನಿವಾಸ್ ಎಂಬ ಅಧಿಕಾರಿಯ ಬೆವರಿಳಿಸಿದ ಸಚಿವರು ಸಸ್ಪೆಂಡ್ ಮಾಡ್ತೀನಿ ನಿನ್ನ, ನೀನು ಮಾತ್ರ ಸಂಬಳ ತೆಗೆದುಕೊಂಡರೆ ಸಾಕಾ..? ಎಂದು ಹರಿಹಾಯ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada