ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಘತ್ತರಗಾ ಗ್ರಾಮದಲ್ಲಿ ಹಲ್ಲೆ ನಡೆಸಿ ಜೀವಭಯ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಏಳು ಜನರಿಗೆ ಕಲಬುರಗಿಯ 2 ನೇ ಅಪರ ಜೆಎಂಎಫ್ಸಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ,ತಲಾ 3 ಸಾವಿರ ರೂ ದಂಡ ವಿಧಿಸಿದೆ.
2014 ರ ಡಿಸೆಂಬರ್ 24 ರಂದು ಘತ್ತರಗಾ ಗ್ರಾಮದ ಸುಭಾಷ ಕುಂಬಾರ ಎಂಬುವವರು ಅದೇ ಗ್ರಾಮದ ಕಾಳಮ್ಮ ಎಂಬುವವರಿಗೆ ನಮ್ಮ ಕೌಟುಂಬಿಕ ವಿಷಯವನ್ನು ಜನರ ಮುಂದೆ ಏಕೆ ಹೇಳುತ್ತಿರುವೆ ಎಂದು ಆಕ್ಷೇಪಿಸಿದ್ದರು.ಇದರಿಂದ ಸಿಟ್ಟಿಗೆದ್ದ ಕಾಳಮ್ಮನ ಕಡೆಯವರು ಗುಂಪು ಕಟ್ಟಿಕೊಂಡು ಬಂದು ಸುಭಾಷ ಮತ್ತಿತರರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು.
ಅಫಜಲಪುರ ಠಾಣೆಯ ಪೊಲೀಸ ಠಾಣೆಯಲ್ಲಿ ದೂರ ದಾಖಲಾಗಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 2 ನೇ ಅಪರ ಜೆಎಂಎಫ್ಸಿ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶರಾದ ಬಸವರಾಜ ನೇಸರಗಿ ಅವರು ಅಪರಾಧಿಗಳಿಗೆ ಶಿಕ್ಷೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಸಂತೋಷಕುಮಾರ ಲೊಖಂಡೆ ಅವರು ವಾದ ಮಂಡಿಸಿದ್ದರು.
https://play.google.com/store/apps/details?id=com.speed.newskannada