ಹಾವು ಹಿಡಿಯುವ ಹೆಸರಾಂತ ವಾವಾ ಸುರೇಶ್ ಸ್ಥಿತಿ ಚಿಂತಾಜನಕ.

ಕೊಟ್ಟಾಯಂ : ಕೇರಳದ ಹೆಸರಾಂತ ಹಾವು ಹಿಡಿಯುವವರಲ್ಲಿ ಒಬ್ಬರಾದ ವಾವಾ ಸುರೇಶ್ ಅವರಿಗೆ ಸೋಮವಾರ ವಿಷಪೂರಿತ ನಾಗರಹಾವು ಕಚ್ಚಿದ್ದು, ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಾವಾ ಸುರೇಶ್ ಅವರ ಚೇತರಿಕೆಗಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.ಮೂಲಗಳ ಪ್ರಕಾರ, ಅವರು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದು,ಸ್ಥಿತಿ ಚಿಂತಾಜನಕವಾಗಿದೆ ಆದರೆ ವಿಶೇಷ ಆರೈಕೆಗಳ ಬಳಿಕ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.ಕೊಟ್ಟಾಯಂನ ಕುರಿಚಿ ಗ್ರಾಮದ ಮನೆಗೆ ಹಾವು ಹಿಡಿಯಲು ಹೋದಾಗ ಹಾವು ಕಚ್ಚಿಯೇ ಬಿಟ್ಟಿದೆ.ಸುರೇಶ ಹಾವನ್ನು ಹಿಡಿಯುವುದನ್ನು ವೀಕ್ಷಿಸಲು ಅಪಾರ ಜನಸ್ತೋಮವೇ ನೆರೆದಿತ್ತು, ಒಂದು ಕೈಯಲ್ಲಿ ಬಾಲ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಯತ್ನಿಸುತ್ತಿದ್ದಾಗ ಸರ್ಪ ಬಲತೊಡೆಗೆ ಕಚ್ಚಿದೆ. ಕಚ್ಚಿದ ಬಳಿಕವೂ ತಪ್ಪಿಸಿಕೊಂಡ ನಾಗರಹಾವನ್ನು ಹಿಡಿದು, ಅದನ್ನು ಪ್ಯಾಕ್ ಮಾಡಿ, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದರು ಎಂದು ವರದಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಪ್ಸೀ ಪನ್ನು: ಮಹಿಳಾ ನಾಯಕಿಯೊಂದಿಗೆ ಕೆಲವು ಅತ್ಯುತ್ತಮ ಸ್ಕ್ರಿಪ್ಟ್ಗಳು ನನ್ನ ಬಳಿಗೆ ಬಂದವು;

Tue Feb 1 , 2022
ಪ್ರಮುಖ ದಿನಪತ್ರಿಕೆಯೊಂದಿಗಿನ ಅವರ ಇತ್ತೀಚಿನ ಟೆಟೆ-ಎ-ಟೆಟೆಯಲ್ಲಿ, ನಟಿ ತಾಪ್ಸಿ ಪನ್ನು ಅವರು ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದರು, ಏಕೆಂದರೆ ಮಹಿಳಾ ನಾಯಕಿಯೊಂದಿಗೆ ಉದ್ಯಮದಲ್ಲಿ ಅತ್ಯುತ್ತಮ ಸ್ಕ್ರಿಪ್ಟ್‌ಗಳು ನನ್ನ ಬಳಿಗೆ ಬರುತ್ತವೆ ಎಂದು ಅವರು ಭಾವಿಸುತ್ತಾರೆ.  ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು, “ನನಗೆ ಕೇಂದ್ರ ಪಾತ್ರಗಳು ಸಿಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ, ಮಹಿಳಾ ನಾಯಕಿಯೊಂದಿಗೆ ಉದ್ಯಮದಲ್ಲಿ ಕೆಲವು ಅತ್ಯುತ್ತಮ ಚಿತ್ರಕಥೆಗಳು ನನ್ನ ಬಳಿಗೆ ಬರುತ್ತವೆ ಎಂದು ನಾನು ನಿರ್ಲಜ್ಜೆ […]

Advertisement

Wordpress Social Share Plugin powered by Ultimatelysocial