ಹಿಮಕುಸಿತ: ಭಾರತ-ಟಿಬೆಟ್‌ ರಸ್ತೆ ಬಂದ್‌.

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಗುರುವಾರ ಹಿಮಕುಸಿತ ಸಂಭವಿಸಿದ್ದು, ಭಾರತ (ಹಿಂದೂಸ್ತಾನ್)-ಟಿಬೆಟ್ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಹ್ ಬಳಿಯ ಟಿಂಕು ನಲ್ಹಾ ಬಳಿ ಹಿಮಕುಸಿತ ಸಂಭವಿಸಿದ್ದು, ರಸ್ತೆ (ರಾಷ್ಟ್ರೀಯ ಹೆದ್ದಾರಿ 5) ತೆರವು ಕಾರ್ಯ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, 4 ರಾಷ್ಟ್ರೀಯ ಹೆದ್ದಾರಿ ಸೇರಿ, ರಾಜ್ಯದ ಇತರ ಭಾಗಗಳಲ್ಲಿ ಹಿಮಪಾತದಿಂದ 256 ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಅದರ ಜೊತೆಗೆ 1,024 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ.

ಹಿಮಾಚಲ ಪ್ರದೇಶದ ಅನೇಕ ಎತ್ತರ ಪ್ರದೇಶಗಳಲ್ಲಿ ಜ.29,30ರಂದು ತೀವ್ರ ಮಳೆ ಮತ್ತು ಹಿಮ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಮಳೆಯಿಂದ ಸಸ್ಯಗಳು ಕೊಳೆಯಲು ಅಥವಾ ಗೋಧಿ ಮತ್ತು ತರಕಾರಿಗಳಲ್ಲಿ ಮೊಳಕೆಯೊಡೆಯಲು ಕಾರಣವಾಗಬಹುದು, ನೀರು ನಿಲ್ಲದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಹಾರದಲ್ಲಿ 80ಕ್ಕೂ ಹೆಚ್ಚು ಜನರಿಗೆ 'ಬೀದಿನಾಯಿ ಅಟ್ಯಾಕ್‌' .

Fri Jan 27 , 2023
ಬಿಹಾರ : ದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದೀಗ ಬಿಹಾರದ ನಗರದಲ್ಲಿ ಮಕ್ಕಳು ಸೇರಿದಂತೆ 80 ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ಅಟ್ಯಾಕ್‌ ಮಾಡಿದ್ದು, ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೀದಿ ನಾಯಿ ಕಡಿತಗೊಂಡು ಬರೊಬ್ಬರಿ 80 ಜನರು ಅರ್ರಾಹ್ ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗಿಗಳಲ್ಲಿ, 10-12 ಮಕ್ಕಳು. ರೋಗಿಗಳಿಗೆ ಪ್ರಥಮ ಚಿಕಿತ್ಸೆನೀಡಲಾಗಿದೆ ಎಂದು ವೈದ್ಯರು ಡಾ.ನವನೀತ್ ಕುಮಾರ್ ಚೌಧರಿ ಮಾಹಿತಿ ನೀಡಿದ್ದಾರೆ. ಬೀದಿನಾಯಿಗಳ […]

Advertisement

Wordpress Social Share Plugin powered by Ultimatelysocial