ಕರಗ ಶ್ರೀ ದ್ರೌಪದಿ ಧರ್ಮರಾಯ ದೇವಸ್ಥಾನದಲ್ಲಿ ಇಂದು ವಿಶೇಷ ಅಲಂಕಾರ ಪೂಜೆಯೊಂದಿಗೆ ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ವತಿಯಿಂದ ಕರ್ನಾಟಕದ ವಹ್ನಿಕುಲ ಕ್ಷತ್ರಿಯ ಜನಾಂಗದವರ ರಾಜಕುಲಗಳ ಇತಿಹಾಸ , ಪರಂಪರೆ , ಹಿನ್ನೆಲೆಯನ್ನ ಒಳಗೊಂಡಂತಹ ದಿನದರ್ಶಿಕೆಯನ್ನ ಬಿಡುಗಡೆ ಗೊಳಿಸಲಾಯಿತು.
ದಿನದರ್ಶಿಕೆಯಲ್ಲಿ ಧಕ್ಷಿಣ ಭಾರತದ ರಾಜಕುಲಗಳಾದ ಸಾವಿರಾರು ವರ್ಷಗಳ ಶಾಸನಗಳಾದ ಪಲ್ಲವ , ಚೋಳ , ಗಂಗಾ , ಹೊಯ್ಸಳ , ಹಾಗು ಕನ್ನಡಿಗರ ರಾಜಕುಲಗಳಾದ ಚಾಲುಕ್ಯ ರಾಜನಾದ ಧಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ತಾನು ವಹ್ನಿಕುಲ ಕ್ಷತ್ರಿಯ ಜಾತಿಗೆ ಸೇರಿದವರು ಎನ್ನುವ ೧೦೪೮ ನೇ ಇಸವಿಯ ಶಾಸನಗಳನ್ನು ಒಳಗೊಂಡಿದೆ ಹಾಗಾಗಿ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ನಾನುಡಿಯಂತೆ ಪ್ರತಿಯೊಬ್ಬ ವಹ್ನಿಕುಲ ವನ್ನಿಕುಲ ಕ್ಷತ್ರಿಯನ್ನು ಹಾಗು ಇದರ ಉಪಜಾತಿಗಳಾದ ವನ್ನೆ ರೆಡ್ಡಿ , ವನ್ನೆ ಕಾಪು , ಪಳ್ಳಿ ರೆಡ್ಡಿ , ಪಳ್ಳಿ ಕಾಪು , ಪಳ್ಳಿ , ವನ್ನಿಯಾರ್ , ಧರ್ಮರಾಯ ವಕ್ಕಲಿಗ , ಧರ್ಮರಾಜಕಾಪು ಇತ್ಯಾದಿ ಸಮಾಜದವರು ಈ ದಿನದರ್ಶಿಕೆಯನ್ನ ಪಡೆದು ಮುಂದಿನ ಪೀಳಿಗೆಗೆ ಮಾರ್ಗ ದರ್ಶಕರಾಗಬೇಕುಎಂದರು ಎಂದು ರಾಜ್ಯಾಧ್ಯಕ್ಷ ವರ್ತುರ್ ಜೆ ಕೆ ಗಿರೀಶ್ ಮನವಿ ಮಾಡಿದ್ದಾರೆ.ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನ ಸಮೀತಿಯ ಅಧ್ಯಕ್ಷರಾದ ಸತೀಶ್ ( ಪಲ್ಸರ್ ) ಬಾಲಕ್ರಿಷ್ಣ ( ಸೂರಿ ) ಕರಗ ಪೂಜಾರಿಗಳಾದ ಜ್ಞಾನೇಂದ್ರ , ಉಪಾಧ್ಯಕ್ಷರಾದ ವೇಣು ಅ, ಏಓ ಗ್ರೂಪ್ ಮಾಲೀಕರಾದ ಏ.ಓ. ರಾಜ್ ಕ್ರಿಶ್ಣಮೂರ್ತಿ , ದ್ರೌಪಧಿ ದೇವಸ್ಥಾನಗಳ ಇತಿಹಾಸಕಾರರಾದ ನಾಗರಾಜ್ ಪಾಲ್ಗೊಂಡಿದ್ದರು.
https://play.google.com/store/apps/details?id=com.speed.newskannada