ಮೈಸೂರು, ಮೇ 25- ನಮ್ಮದು ಏಕ ಸಂಸ್ಕøತಿ ಅಲ್ಲ, ಎಲ್ಲರನ್ನೊಳಗೊಂಡ ಬಹು ಸಂಸ್ಕøತಿ. ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ದೇವನೂರು ಮಹಾದೇವ ಅವರು ಹಿರಿಯ ಸಾಹಿತಿಗಳು. ಅವರು ಹೇಳುವುದರಲ್ಲೂ ಸತ್ಯವಿದೆ. ನಾವು ಅಳವಡಿಕೆ ಮಾಡಿರುವುದರಲ್ಲೂ ಸತ್ಯವಿದೆ. ನಾನು ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಪಠ್ಯಪುಸ್ತಕ ಪರಿಷ್ಕರಣೆ ಗೊಂದಲವನ್ನು ನಿವಾರಿಸಲಾಗುವುದು ಎಂದರು.
ಪಠ್ಯಪರಿಷ್ಕರಣೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಆಕ್ಷೇಪ ವಿಚಾರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಅವರ ಪತ್ರದ ಬಗ್ಗೆ ಗಮನಿಸಿದ್ದೇನೆ. ಆದರೆ ನನಗೆ ಅವರಿಂದ ಯಾವುದೇ ಪತ್ರ ಬಂದಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಕಾಂಗ್ರೆಸ್ನದ್ದು ನೀಚಬುದ್ಧಿ. ವಿಚಾರಗಳ ಚರ್ಚೆಯಲ್ಲಿ ಸೋತು ಕಾಂಗ್ರೆಸ್ ನವರು ವ್ಯಕ್ತಿಗತ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಪಠ್ಯವನ್ನೇ ಓದದೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ನಾಗೇಶ್ ಹರಿಹಾಯ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada