ಭಜರಂಗಿ ಡೈರೆಕ್ಟರ್ ಟಾಲಿವುಡ್ ಪ್ರೊಜೆಕ್ಟ್ ;

ನ್ನಡ ಚಿತ್ರರಂಗದ ಖ್ಯಾತಿ  ಎಲ್ಲೆಡೆ ಪಸರಿಸುತ್ತಲೇ ಇದೆ. ಈ ಹಿಂದೆ ಕನ್ನಡ ಸಿನಿಮಾರಂಗದ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿದೆ. ಸಿನಿಮಾ ಪ್ರೇಮಿಗಳು (Sandalwood Cinemas) ಇಲ್ಲಿವರೆಗೂ ಕನ್ನಡದಲ್ಲಿ ಮಾತ್ರ ಇದ್ದರು. ಆದರೆ ಕನ್ನಡ ಚಿತ್ರ ಪ್ರೇಮಿಗಳು ಈಗ ಪರ ಭಾಷೆಯಲ್ಲೂ ಇದ್ದಾರೆ.

ಕನ್ನಡದಕಂಟೆಂಟ್​​ನ್ನ ತಮ್ಮ ಭಾಷೆಯಲ್ಲಿ ನೋಡ್ತಿದ್ದಾರೆ. ಇದರಿಂದ ಕನ್ನಡ ಚಿತ್ರಗಳ ಮಾರುಕಟ್ಟೆ ಪರ ಭಾಷೆಯ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರಿಂದ ಕನ್ನಡದ ನಿರ್ದೇಶಕರ ಜಾಣ್ಮೆ ಈಗ ಅಲ್ಲಿ ನಿರ್ಮಾಪಕರಿಗೂ  ತಿಳಿಸಿದೆ. ಮಫ್ತಿ ಚಿತ್ರ ಬಂದಾಗ ನರ್ತನ್ ಅಲ್ಲಿ ಪರಿಚಯವಾದರು. ಆರ್​. ಚಂದ್ರು ಅವರಂತೂ ತಮ್ಮ ಯಾವುದೇ ಚಿತ್ರವಿದ್ದರೂ ಟಾಲಿವುಡ್​​ಗೆ ಮುಟ್ಟಿಸಿ ಬರ್ತಾರೆ.

ಮೊನ್ನೆ ಮೊನ್ನೆ ವೇದ ಚಿತ್ರವೂ ರಿಲೀಸ್ ಆಯಿತು. ಇದರ ವಿಷಯ ಎಲ್ಲ ಕಾಲಕ್ಕೂ ಎಲ್ಲರ ಹೃದಯದಲ್ಲೂ ಉಳಿಯುವಂತಹದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆ ಗೀತಾ ಪಿಕ್ಚರ್ಸ್ ತಮ್ಮ ಈ ಚಿತ್ರವನ್ನ ಟಾಲಿವುಡ್​​ನಲ್ಲೂ ರಿಲೀಸ್ ಮಾಡಿದೆಶಿವ ವೇದ ಬಳಿಕ ಹೆಚ್ಚಿದ ಡೈರೆಕ್ಟರ್ ಎ. ಹರ್ಷಾ ಬೇಡಿಕೆ
ಶಿವ ವೇದ ಹೆಸರಿನಲ್ಲಿ ಈ ಒಂದು ಚಿತ್ರ ಟಾಲಿವುಡ್​ನಲ್ಲಿ ರಿಲೀಸ್ ಆಗಿತ್ತು. ಇದಕ್ಕಾಗಿಯೇ ಇಲ್ಲಿ ಪ್ರೀ ರಿಲೀಸ್ ಇವೆಂಟ್ ಕೂಡ ನಡೆದಿತ್ತು. ದೊಡ್ಡಮಟ್ಟದಲ್ಲಿಯೇ ಚಿತ್ರ ಟಾಲಿವುಡ್​​ನಲ್ಲಿ ರಿಲೀಸ್ ಆಗಿತ್ತು.

ಇಂತಹ ಸಿನಿಮಾ ಡೈರೆಕ್ಟರ್ ಎ. ಹರ್ಷಾ ಸುತ್ತ ಈಗೊಂದು ಸುದ್ದಿ ಹರಿದಾಡುತ್ತಿದೆ. ಕನ್ನಡದ ನಿರ್ದೇಶಕ ಎ. ಹರ್ಷಾ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿಯೇ ಇದೆ.

ಟಾಲಿವುಡ್​ನಲ್ಲಿ ಎ. ಹರ್ಷ ಮಾಡ್ತಿರೋ ಚಿತ್ರ ಯಾವುದು?
ಟಾಲಿವುಡ್​​ನಲ್ಲಿ ದೊಡ್ಡ ಬಜೆಟ್​​ನ ಸಿನಿಮಾ ರೆಡಿ ಆಗುತ್ತವೆ. ಇಲ್ಲಿ ಭಾರಿ ವೆಚ್ಚದ ಸಿನಿಮಾ ನಿರ್ವಿಸುವ ಸಂಸ್ಥೆ ಕೂಡ ಇವೆ. ಹೀಗಿರೋವಾಗ ಕನ್ನಡದ ಎ.ಹರ್ಷ ಅವರು ಈಗ ಇಲ್ಲಿಯ ಒಂದು ಚಿತ್ರವನ್ನ ನಿರ್ದೇಶನ ಮಾಡೋ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಅನ್ನುವ ಸುದ್ದಿ ಇದೆ.

ಸದ್ಯ ಹರಿದಾಡುತ್ತಿರೋ ಸುದ್ದಿ ನಿಜವೇ? ಇಲ್ಲವೇ ಗಾಳಿ ಸುದ್ದಿನಾ? ಅನ್ನುವ ಕುತೂಹಲ ಕೂಡ ಮೂಡಿಸಿದೆ. ಆದರೆ ಈ ಬಗ್ಗೆ ತೆಲುಗು ಚಿತ್ರರಂಗದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಟಾಲಿವುಡ್ ಪ್ರೊಜೆಕ್ಟ್​ ಬಗ್ಗೆ ಎ.ಹರ್ಷ ಕೊಟ್ಟ ಡಿಟೈಲ್ಸ್ ಏನು?
ಆದರೆ ಹರ್ಷ ಅವರಿಗೆ ಬೆಳಗ್ಗೆಯಿಂದಲೇ ಅನೇಕ ಕಾಲ್​ಗಳು ಬರ್ತಿವೆ. ನೀವು ಟಾಲಿವುಡ್​ ಸಿನಿಮಾ ಮಾಡ್ತಿರೋದು ನಿಜವೇ? ಅನ್ನುವ ಆ ಪ್ರಶ್ನೆಗೆ ಡೈರೆಕ್ಟರ್ ಎ. ಹರ್ಷ ಉತ್ತರ ಕೂಡ ಕೊಟ್ಟಿದ್ದಾರೆ. ಹಾಗೆ ನ್ಯೂಸ್-18 ಕನ್ನಡ ಡಿಜಿಟ್​ಗೂ ಹರ್ಷ ಈ ವಿಷಯವಾಗಿ ಮಾತನಾಡಿದ್ದಾರೆ.

ಟಾಲಿವುಡ್​ನಲ್ಲಿ ಒಂದು ಸಿನಿಮಾ ಮಾಡುವ ವಿಚಾರ ಇನ್ನೂ ಆರಂಭದ ಹಂತದಲ್ಲಿಯೇ ಇದೆ. ಈ ವಿಷಯವಾಗಿ ಮಾತುಕತೆ ನಡೆಯುತ್ತಿದೆ. ಆದರೆ ಇನ್ನು ಯಾವುದೇ ರೀತಿಯ ನಿರ್ಧಾರಗಳು ಆಗಿಲ್ಲ ಎಂದು ಹರ್ಷ ಹೇಳಿದ್ದಾರೆ.

ಟಾಲಿವುಡ್​ ಪ್ರೊಜೆಕ್ಟ್​ ಬಗ್ಗೆ ಹರ್ಷ ಇನ್ನೂ ಏನ್ ಹೇಳ್ತಾರೆ?
ಡೈರೆಕ್ಟರ್ ಹರ್ಷ ಪಕ್ಕಾ ಪ್ಲಾನ್ ಮಾಡಿಕೊಂಡೇ ಸಿನಿಮಾ ಮಾಡುತ್ತಾರೆ. ಸ್ಕ್ರಿಪ್ಟ್ ಲೆವಲ್​​ನಲ್ಲಿಯೇ ಒಳ್ಳೆ ಕಥೆ ಮಾಡಿಕೊಂಡಿರುತ್ತಾರೆ. ವೇದ ಚಿತ್ರವನ್ನು ಅದೇ ರೀತಿ ರೆಡಿ ಮಾಡಿಕೊಂಡಿದ್ದರು.ಹಾಗೇನೆ ಈಗ ತೆಲುಗು ಚಿತ್ರಕ್ಕೆ ಸಂಬಂಧಿಸಿದಂತೆ ತಯಾರಿಯನ್ನ ಮಾಡಿಕೊಳ್ತಾರೆ ಅಂತಲೇ ಹೇಳಬಹುದು. ಆದರೆ ಈ ಬಗ್ಗೆ ಈಗಲೇ ಏನೂ ಹೇಳೋಕೆ ಆಗೋದಿಲ್ಲ ಅನ್ನುವ ಅರ್ಥದಲ್ಲಿ ಡೈರೆಕ್ಟರ್ ಎ. ಹರ್ಷ ಹೇಳಿಕೊಳ್ತಾರೆ.ಹಾಗೇನೆ ಸದ್ಯ ಹರಿದಾಡುತ್ತಿರೋ ಸುದ್ದಿಗೆ ಸಂಬಂಧಿಸಿದಂತೆ ಡೈರೆಕ್ಟರ್ ಎ. ಹರ್ಷ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ರಿಯ್ಯಾಕ್ಟ್ ಮಾಡಿದ್ದಾರೆ. ಈ ಚಿತ್ರದ ಮಾಹಿತಿಯನ್ನ ಅಧಿಕೃತವಾಗಿಯೇ ಕೊಡೊದಾಗಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಹಾಡು ಹಾಕಿ ಎಂದಿದ್ದಕ್ಕೆ ಥಳಿತ:

Wed Mar 1 , 2023
ಕಳೆದ ಕೆಲವು ತಿಂಗಳಿನಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯುತ್ತಲೇ ಇದೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಅಭಿಮಾನಿಗಳು ಕಿತ್ತಾಡುತ್ತಲೇ ಇದ್ದಾರೆ. ‘ಕ್ರಾಂತಿ’ ಸಾಂಗ್ ರಿಲೀಸ್ ವೇಳೆ ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಈ ಕಿತ್ತಾಟ ತಾರಕಕ್ಕೇರಿತ್ತು.ಅದು ಇನ್ನೇ ತಣ್ಣಗಾಗುತ್ತಿದೆ ಎನ್ನುವಾಗಲೇ ಮೈಸೂರಿನಲ್ಲಿ ದರ್ಶನ್ ಅಭಿಮಾನಿ ವಿರುದ್ಧ ಅಪ್ಪು ಫ್ಯಾನ್ ದೂರು ದಾಖಲಿಸಿದ್ದಾರೆ. ಶನಿವಾರ (ಫೆಬ್ರವರಿ 25) […]

Advertisement

Wordpress Social Share Plugin powered by Ultimatelysocial