ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ(ರಿ) ಬೆಂಗಳೂರು ಮತ್ತು ಪೂಜ್ಯ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಮತ್ತು ಬಂಜಾರ, ಕೊರಚ, ಕೊರಮ ಮತ್ತು ವಿವಿಧ ಜಾತಿ ಮಠಾಧೀಶರ ನೇತೃತ್ವದಲ್ಲಿ ನಡೆದ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿರುವ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿ, ಕಲಬುರಗಿ ಜಿಲ್ಲೆಯ ವಕೀಲರಾದ ಶ್ರೀ ರವಿಚಂದ್ರ ಗುತ್ತೇದಾರ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘ (ರಿ). ರವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿ ನ್ಯಾ. ಸದಾಶಿವ ಆಯೋಗದ ವರದಿ ಅಭಿವೃದ್ಧಿ ವಿರುದ್ಧ ಮತ್ತು ರಾಜ್ಯ ಸರ್ಕಾರದ ನಡೆಯ ವಿರುದ್ಧ ಉಗ್ರವಾಗಿ ಖಂಡಿಸಿ ಮಾತನಾಡಿದರು. 99 ದಮನಿತ ಸಮುದಾಯದ ಸಹೋದರರು ಇಂದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಸ್ವತಂತ್ರ ಉದ್ಯಾನದವರೆಗೆ ಲಕ್ಷೋಪಲಕ್ಷ ಜನಸಂಖ್ಯೆಯ ಬೃಹತ್ ಕಾಲ್ನಡಿಗೆಯ ಮೆರವಣಿಗೆಯಲ್ಲಿ ಸಾಗಿ, ಹೋರಾಟದ ಸ್ವಾಭಿಮಾನದ ಕಿಚ್ಚಿನ ಮಂತ್ರಗಳನ್ನು ಪಟಿಸುತ್ತಾ,, ಐತಿಹಾಸಿಕ ಸಮಾವೇಶದಲ್ಲಿ ಜೊತೆಯಾಗಿ, ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದೆವು. ತದನಂತರ ಘನ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ, ಕಂದಾಯ ಸಚಿವರಾದ ಸನ್ಮಾನ್ಯ ಆರ್ ಆಶೋಕ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.*
ಮನವಿ ಸ್ವೀಕರಿಸಿದ ನಂತರ ಮಾನ್ಯ ಕಂದಾಯ ಸಚಿವರು ಮಾತನಾಡಿ, ಘನ ಸರ್ಕಾರವು ಸದಾ ನಿಮ್ಮೊಟ್ಟಿಗಿದ್ದು, ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಿಲ್ಲವೆಂದು ಈಗಿರುವ ಮೀಸಲಾತಿಯಿಂದ ವಂಚಿಸುವುದಿಲ್ಲವೆಂದು ಮಾತು ಕೊಟ್ಟರು.ಈ ಸಂದರ್ಭದಲ್ಲಿ ರಾಜ್ಯದ 99 ದಮನಿತ ಸಮುದಾಯದ ಪರಮಪೂಜ್ಯರು, ಮುಖಂಡರುಗಳು ಹಾಗೂ ಮಹಿಳೆಯರನ್ನೊಳಗೊಂಡಂತೆ ಜನಸಾಮಾನ್ಯರು ಪಾಲ್ಗೊಂಡು ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾದರು.
https://play.google.com/store/apps/details?id=com.speed.newskannada